ಬೆಳ್ತಂಗಡಿ ಯುವ ವಕೀಲರ ತಂಡದಿಂದ ಹಣ್ಣಿನ ಗಿಡ ನೆಡುವ ಕಾರ್ಯಕ್ರಮ

Suddi Udaya

ಬೆಳ್ತಂಗಡಿ : ಬೆಳ್ತಂಗಡಿ ಯುವ ವಕೀಲರ ತಂಡದವರಿಂದ ಚಿಕ್ಕಮಗಳೂರಿನ ಕಾಳಬೈರವ ದೇವಸ್ಥಾನದ ಸುತ್ತಮುತ್ತಲಿನ ಕಾಡುಗಳಲ್ಲಿ ಜೂ. 25ರಂದು ಹಣ್ಣಿನ ಸಸಿಗಳನ್ನು ನೆಡುವ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ. ಇನ್ನೂ 5-6 ವರ್ಷಗಳ ಬಳಿಕ ಕಾಡಿನಲ್ಲಿರುವ ಪ್ರಾಣಿಗಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಕಾರ್ಯಕ್ರಮದಲ್ಲಿ ಯುವ ವಕೀಲರಾದ ತೇಜಸ್ ನಾಯಕ್ ಕೊಂಬೆಟ್ಟು, ಶ್ರವಣ್ ಕುಮಾರ್, ವಿನೋದರ, ಭಟ್ & ಭಟ್ ಯ್ಯೂಟೂಬ್ ಚಾನೆಲ್ ಖ್ಯಾತಿಯ ಸುದರ್ಶನ್ ಭಟ್, ಮನೋಹರ್ ಭಟ್, ಸುಜಿತ್, ಸುನೀಲ್, ಜ್ಞಾನೇಶ್ ಪ್ರಥಮ್ ಭಾಗಿಯಾಗಿದ್ದರು.

Leave a Comment

error: Content is protected !!