23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಅರಸಿನಮಕ್ಕಿ ಶಿವಾನಿ ಸಂಜೀವಿನಿ ಒಕ್ಕೂಟದಲ್ಲಿ ಮೇಣದ ಬತ್ತಿ ಹಾಗೂ ದೀಪದ ಬತ್ತಿ ಮಾಡುವ ಪ್ರಾತ್ಯಕ್ಷಿಕೆ

ಅರಸಿನಮಕ್ಕಿ : ಅರಸಿನಮಕ್ಕಿ ಶಿವಾನಿ ಸಂಜೀವಿನಿ ಒಕ್ಕೂಟದಲ್ಲಿ ಮೇಣದ ಬತ್ತಿ ಹಾಗೂ ದೀಪದ ಬತ್ತಿ ಮಾಡುವ ಪ್ರಾತ್ಯಕ್ಷಿಕೆ ಯ ಮೂಲಕ ಉತ್ತಮ ಮಾಹಿತಿಯೊಂದಿಗೆ ತರಬೇತಿ ಕಾರ್ಯಕ್ರಮ ಜೂ.30 ರಂದು ನಡೆಯಿತು.

ತರಬೇತಿ ಕಾರ್ಯಕ್ರಮವನ್ನು ಅರಸಿನಮಕ್ಕಿ ಗ್ರಾ.ಪಂ.ಅಧ್ಯಕ್ಷ ನವೀನ್ ಕೆ.ಎನ್ ಉದ್ಘಾಟಿಸಿದರು

ಸ್ಥಳೀಯರಾದ ಶಿವರಾಮ ಮೇಣದ ಬತ್ತಿ ತರಬೇತಿಯನ್ನು ಉತ್ತಮ ರೀತಿಯ ವಿವರಣೆಯೊಂದಿಗೆ ಪ್ರಾತ್ಯಕ್ಷಿಕೆಯ ಮೂಲಕ ಸದಸ್ಯರಿಗೆ ಮಾಹಿತಿ ನೀಡಿದರು.

ಉದ್ಯೋಗದ ಬಗೆಗಿನ ವಸ್ತುಗಳ ಖರೀದಿ ಮಾರಾಟದ ವಿಧಾನ ಇವುಗಳ ಬಗ್ಗೆ ಉತ್ತಮ ರೀತಿಯ ಸಲಹೆ ಸೂಚನೆಗಳನ್ನು ತಾಲೂಕು ಮೇಲ್ವಿಚಾರಕಿ ಪ್ರತಿಮಾ ವಿವರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಶಸ್ತಿ ಪಡೆದ ನೀತೇಶ್ ಇವರಿಗೆ ಒಕ್ಕೂಟದ ಪರವಾಗಿ ಸನ್ಮಾನ ನಡೆದವು. ಹಾಗೂ ಗಾಯತ್ರಿ ಮೆಹಂದಲೇ ಯವರು ದೀಪದ ಬತ್ತಿ ಮಾಡುವ ತರಬೇತಿ ಯನ್ನು ಉತ್ತಮ ರೀತಿಯಲ್ಲಿ ನಡೆಸಿದರು,

ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರು, ನಿತೇಶ್, ವೀಣಶ್ರೀ ಎಲ್.ಸಿ.ಆರ್.ಪಿ ಅಮಿತಾ ಎಮ್.ಬಿ.ಕೆ ರೇವತಿ, ಕೃಷಿ ಉದ್ಯೋಗ ಸಖಿ ಹಾಗೂ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಲ್.ಸಿ.ಆರ್.ಪಿ ಹೇಮಲತಾ ನಿರೂಪಿಸಿ, ಕೃಷಿ ಸಖಿ ನೀತಾ ಸ್ವಾಗತಿಸಿ, ಪಶು ಸಖಿ ವೇದಾವತಿ ಧನ್ಯವಾದವಿತ್ತರು.

Related posts

ಭಾರೀ ಹದಗೆಟ್ಟ ಕಳಿಯ ದೇರ್ಜಾಲು ರಸ್ತೆ: ಅಭಿವೃದ್ಧಿಗೆ ಗ್ರಾಮಸ್ಥರ ಆಗ್ರಹ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮುದಾಯ ಅಭಿವೃದ್ಧಿ ವಿಭಾಗ 507 ಶಾಲೆಗಳಿಗೆ ರೂ. 2.75 ಕೋಟಿ ಮೊತ್ತದ 4,044 ಜೊತೆ ಡೆಸ್ಕ್ -ಬೆಂಚ್ ವಿತರಣೆ

Suddi Udaya

ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರ ಸಮಾರೋಪ ಸಮಾರಂಭ

Suddi Udaya

ಯಶಸ್ವಿಯಾಗಿ ಚಂದ್ರನ ಅಂಗಳಕ್ಕೆ ಕಾಲಿಟ್ಟ ವಿಕ್ರಮ್ ಲ್ಯಾಂಡರ್ : ಇತಿಹಾಸ ಸೃಷ್ಟಿಸಿದ ಭಾರತ

Suddi Udaya

ಉಜಿರೆ: ವಾಸದ ಮನೆ ಕೆಡವಿ ಮನೆ ಸೊತ್ತು ಬೀದಿಗೆಸೆದ ವಿಲಕ್ಷಣ ಘಟನೆ: ವೀಡಿಯೋ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಗೆ ಜೀವ ಬೆದರಿಕೆ

Suddi Udaya

ಬಿರುವೆರ್ ಕುಡ್ಲ ತಂಡದ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಗೆ ಭೇಟಿ: ಉದ್ಯಮಿ ಮೋಹನ್ ಕುಮಾರ್ ರವರಿಂದ ಗೌರವ,

Suddi Udaya
error: Content is protected !!