September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಅರಸಿನಮಕ್ಕಿ ಶಿವಾನಿ ಸಂಜೀವಿನಿ ಒಕ್ಕೂಟದಲ್ಲಿ ಮೇಣದ ಬತ್ತಿ ಹಾಗೂ ದೀಪದ ಬತ್ತಿ ಮಾಡುವ ಪ್ರಾತ್ಯಕ್ಷಿಕೆ

ಅರಸಿನಮಕ್ಕಿ : ಅರಸಿನಮಕ್ಕಿ ಶಿವಾನಿ ಸಂಜೀವಿನಿ ಒಕ್ಕೂಟದಲ್ಲಿ ಮೇಣದ ಬತ್ತಿ ಹಾಗೂ ದೀಪದ ಬತ್ತಿ ಮಾಡುವ ಪ್ರಾತ್ಯಕ್ಷಿಕೆ ಯ ಮೂಲಕ ಉತ್ತಮ ಮಾಹಿತಿಯೊಂದಿಗೆ ತರಬೇತಿ ಕಾರ್ಯಕ್ರಮ ಜೂ.30 ರಂದು ನಡೆಯಿತು.

ತರಬೇತಿ ಕಾರ್ಯಕ್ರಮವನ್ನು ಅರಸಿನಮಕ್ಕಿ ಗ್ರಾ.ಪಂ.ಅಧ್ಯಕ್ಷ ನವೀನ್ ಕೆ.ಎನ್ ಉದ್ಘಾಟಿಸಿದರು

ಸ್ಥಳೀಯರಾದ ಶಿವರಾಮ ಮೇಣದ ಬತ್ತಿ ತರಬೇತಿಯನ್ನು ಉತ್ತಮ ರೀತಿಯ ವಿವರಣೆಯೊಂದಿಗೆ ಪ್ರಾತ್ಯಕ್ಷಿಕೆಯ ಮೂಲಕ ಸದಸ್ಯರಿಗೆ ಮಾಹಿತಿ ನೀಡಿದರು.

ಉದ್ಯೋಗದ ಬಗೆಗಿನ ವಸ್ತುಗಳ ಖರೀದಿ ಮಾರಾಟದ ವಿಧಾನ ಇವುಗಳ ಬಗ್ಗೆ ಉತ್ತಮ ರೀತಿಯ ಸಲಹೆ ಸೂಚನೆಗಳನ್ನು ತಾಲೂಕು ಮೇಲ್ವಿಚಾರಕಿ ಪ್ರತಿಮಾ ವಿವರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಶಸ್ತಿ ಪಡೆದ ನೀತೇಶ್ ಇವರಿಗೆ ಒಕ್ಕೂಟದ ಪರವಾಗಿ ಸನ್ಮಾನ ನಡೆದವು. ಹಾಗೂ ಗಾಯತ್ರಿ ಮೆಹಂದಲೇ ಯವರು ದೀಪದ ಬತ್ತಿ ಮಾಡುವ ತರಬೇತಿ ಯನ್ನು ಉತ್ತಮ ರೀತಿಯಲ್ಲಿ ನಡೆಸಿದರು,

ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರು, ನಿತೇಶ್, ವೀಣಶ್ರೀ ಎಲ್.ಸಿ.ಆರ್.ಪಿ ಅಮಿತಾ ಎಮ್.ಬಿ.ಕೆ ರೇವತಿ, ಕೃಷಿ ಉದ್ಯೋಗ ಸಖಿ ಹಾಗೂ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಲ್.ಸಿ.ಆರ್.ಪಿ ಹೇಮಲತಾ ನಿರೂಪಿಸಿ, ಕೃಷಿ ಸಖಿ ನೀತಾ ಸ್ವಾಗತಿಸಿ, ಪಶು ಸಖಿ ವೇದಾವತಿ ಧನ್ಯವಾದವಿತ್ತರು.

Related posts

ಕಾಶಿಪಟ್ಣ ಕೇಳ ದೈವ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವ ಸಮಾರಂಭದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸತೀಶ್ ಕೆ ಕಾಶಿಪಟ್ಣರವರಿಗೆ ಸನ್ಮಾನ

Suddi Udaya

ರಾಜ್ಯ ಸರ್ಕಾರ ದ ಜನ ವಿರೋಧಿ ನೀತಿ ಖಂಡಿಸಿ ಚಾರ್ಮಾಡಿ ಗ್ರಾ.ಪಂ. ನಲ್ಲಿ ಪ್ರತಿಭಟನೆ

Suddi Udaya

ಕಳಿಯ: ಪೇರಾಜೆ ನಿವಾಸಿ ನಾಗಮ್ಮ ನಿಧನ

Suddi Udaya

ಎಕ್ಸೆಲ್ ಕಾಲೇಜಿನಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ

Suddi Udaya

ಹೊಸಂಗಡಿ : ಬಡಕೋಡಿ ಕರಿಮಣೇಲು ಒಕ್ಕೂಟದ ವತಿಯಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ

Suddi Udaya

ತುಮಕೂರು ಕುಚ್ಚಂಗಿ ಕೆರೆಯ ಬಳಿ ಮೂವರ ಶವ ಸುಟ್ಟು ಹೋದ ರೀತಿಯಲ್ಲಿ ಪತ್ತೆ: ಮೂವರು ಬೆಳ್ತಂಗಡಿ ತಾಲೂಕಿನಿಂದ ನಾಪತ್ತೆಯಾದವರದ್ದು ಇರಬಹುದೆಂಬ ಶಂಕೆ

Suddi Udaya
error: Content is protected !!