
ಕನ್ಯಾಡಿ: ಸ.ಉ.ಹಿ.ಪ್ರಾ.ಶಾಲೆಯಲ್ಲಿ 15ವರ್ಷಗಳ ಕಾಲ ಸಹಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ವೀರಣ್ಣ ಶೆಟ್ಟಿರವರು ಜೂ.30ರಂದು ಸೇವಾ ನಿವೃತ್ತರಾದರು.
ಇವರು 1999 ಜನವರಿ 13ರಂದು ದೇವರಗುಡ್ಡೆ ಸ.ಹಿ.ಪ್ರಾ.ಶಾಲೆಯಲ್ಲಿ ಸಹಶಿಕ್ಷಕರಾಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡು. 2002-03ನೇ ಸಾಲಿನಲ್ಲಿ ನಿಯೋಜನೆಗೊಂಡುಸ.ಕಿ.ಪ್ರಾ. ಶಾಲೆ ಬೆಳಾಲು-ಪೆರಿಯಡ್ಕದಲ್ಲಿ ಸ್ಥಾಪಕ ಮುಖ್ಯ ಶಿಕ್ಷಕರಾಗಿ ಒಂದೂವರೆ ವರ್ಷ ಕಾಲ ಕರ್ತವ್ಯ ನಿರ್ವಹಿಸಿದ್ದರು. ನಂತರ 2005-06ನೇ ಸಾಲಿನಲ್ಲಿ ಸ.ಹಿ.ಪ್ರಾ. ಶಾಲೆ ದೇವರಗುಡ್ಡೆಯಿಂದ ನಿಯೋಜನೆಗೊಂಡು, ಉಜಿರೆ ಸ.ಕಿ.ಪ್ರಾ. ಶಾಲೆ ಮುಂಡತ್ತೋಡಿಯಲ್ಲಿ ಸ್ಥಾಪಕ ಮುಖ್ಯಶಿಕ್ಷಕರಾಗಿ ಮೂರುವರೆ ವರ್ಷ ಕಾಲ ಸೇವೆ ಸಲ್ಲಿಸಿ, ಸರಕಾರದ ಅನುದಾನದಲ್ಲಿ ಶಾಲಾ ಕಟ್ಟಡ ಕಟ್ಟಿಸುವಲ್ಲಿ ಮುತುವರ್ಜಿ ವಹಿಸಿ, ಉತ್ತಮ ಶಾಲೆಯಾಗಿ ಹಾಗೂ ನಲಿಕಲಿ ಉತ್ತಮವಾಗಿ ನಡೆಯಲು ಕಾರಣಕರ್ತರಾದರು.
2008-09ನೇ ಸಾಲಿನಲ್ಲಿ ಮುಂಡತ್ತೋಡಿ ಶಾಲೆಯಿಂದ ವರ್ಗಾವಣೆಗೊಂಡು, ಒಟ್ಟು 25ವರ್ಷಗಳ ಕಾಲ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಕನ್ಯಾಡಿ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸಿ ಜೂ.30ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.















