ಉಜಿರೆ: ಅರಣ್ಯ ಇಲಾಖೆ ಹಾಗೂ ಎಸ್.ವೈ.ಎಸ್ ಉಜಿರೆ ಯೂನಿಟ್ ಸಹಯೋಗದೊಂದಿಗೆ ವನಮಹೋತ್ಸವ ಕಾರ್ಯಕ್ರಮ

Suddi Udaya

Updated on:

ಉಜಿರೆ : ಅರಣ್ಯ ಇಲಾಖೆ ಹಾಗೂ ಉಜಿರೆ ಎಸ್.ವೈ.ಎಸ್ ಉಜಿರೆ ಯೂನಿಟ್ ಜಂಟಿಯಾಗಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮ ಮುಹಿಯುದ್ದೀನ್ ಜುಮಾ ಮಸೀದಿ ಹಳೇಪೇಟೆ ಉಜಿರೆ ವಠಾರದಲ್ಲಿ ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಹರಿಪ್ರಸಾದ್ ಉಪವಲಯ ಅರಣ್ಯಾಧಿಕಾರಿಗಳು, ರವೀಂದ್ರ ಅಂಕಲಾಡಿ ಉಪವಲಯ ಅರಣ್ಯಾಧಿಕಾರಿಗಳು, ಸಂತೋಷ್ ಅರಣ್ಯ ರಕ್ಷಕರು, ಸದಾನಂದ ಅರಣ್ಯ ವೀಕ್ಷಕರು , ಭಾಗವಹಿಸಿದ್ದರು. ಎಸ್.ಎಮ್.ಎ ರಾಜ್ಯ ಅಧ್ಯಕ್ಷ ಸಯ್ಯದ್ ಇಸ್ಮಾಯಿಲ್ ತಂಗಲ್ . ಕೆ.ಎಮ್.ಜೆ ರಾಜ್ಯ ಸದಸ್ಯರಾದ ಎಸ್ಎಮ್ ತಂಗಲ್, ಎಸ್.ಎಸ್.ಎಫ್ ಅಧ್ಯಕ್ಷರಾದ ಶಾಕಿರ್ , ಜಮಾಅತ್ ಕಮೀಟಿ ಸದಸ್ಯರಾದ ಹನೀಫ್ ಯು ಹೆಚ್, ಉದ್ಯಮಿಗಳಾದ ಶರೀಫ್ ಎ.ಎಮ್, ಮಹಮ್ಮದಾಲಿ , ಎಸ್.ವೈಎಸ್ ಅಧ್ಯಕ್ಷರಾದ ಅಶ್ರಫ್ ಎಮ್.ಹೆಚ್. ಕಾರ್ಯದರ್ಶಿಗಳಾದ ಹಾರಿಸ್, ಹಾತಿಬ್ , ಅಬ್ದುಲ್ಲಾ ನಿಡಿಗಲ್, ಎಸ್.ವೈಎಸ್ ಸರ್ಕಲ್ ಅಧ್ಯಕ್ಷರಾದ ಸಲೀಂ ಕನ್ಯಾಡಿ, ಉಜಿರೆ ಅಧ್ಯಕ್ಷರಾದ ಮಯ್ಯದ್ದಿ ನಜಾತ್, ಅಲ್ ಅಮೀನ್ ಯಂಗ್ಮನ್ಸ್ ಕಾರ್ಯದರ್ಶಿಗಳಾದ ಫಝಲ್ ಕೊಯ, ಕೆ.ಎಮ್.ಜೆ ಉಜಿರೆ ಸರ್ಕಲ್ ಕಾರ್ಯದರ್ಶಿ ಖಾಲಿದ್ ಉಸ್ತಾದ್, ಹುಸನಬ್ಬ ಬಿ.ಎಮ್, ಉಸ್ಮಾನ್ ನೇಷನಲ್ ಹಾಗೂ ಮದರಸ ಅಧ್ಯಾಪಕರು ಹಾಗೂ ಮದರಸ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Comment

error: Content is protected !!