September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೆಎಸ್‌ಎಮ್‌ಸಿಎ ಸಂಘಟನೆಗೆ ನೂತನ ನಿರ್ದೇಶಕರಾಗಿ ರೆ.ಫಾ. ಆದರ್ಶ್ ಜೋಸೆಫ್ ಪುದಿಯೆಡತ್ ನೇಮಕ

ಬೆಳ್ತಂಗಡಿ; ಇಲ್ಲಿನ ಧರ್ಮಪ್ರಾಂತ್ಯದ ಸಂಘಟನೆಯಾದ ಕರ್ನಾಟಕ ಸೀರೋ ಮಲಬಾರ್ ಕ್ಯಾಥೋಲಿಕ್ ಅಸೋಸಿಯೇಷನ್, (ಕೆ ಎಸ್ ಎಂ ಸಿ ಎ (ರಿ) ಇದರ ನೂತನ ನಿರ್ದೇಶಕರಾಗಿ ರೆ. ಫಾ. ಆದರ್ಶ್ ಜೋಸೆಫ್ ಪುತಿಯೇಡತ್ ಇವರನ್ನು ಬೆಳ್ತಂಗಡಿ ಧರ್ಮಧ್ಯಕ್ಷ ಅತೀ ವಂದನೀಯ ಬಿಷಪ್ ಲಾರೆನ್ಸ್ ಮುಕ್ಕುಯಿ ಇವರು ನೇಮಕ ಮಾಡಿದ್ದಾರೆ.

ಅತ್ಯಂತ ಉತ್ಸಾಹಿ ಸಂಘಟಕರಾದ ಫಾ. ಆದರ್ಶ್ ಅವರು ಕೆ ಎಸ್ ಎಂ ಸಿ ಎ ನಿರ್ದೇಶಕರಾಗಿ ನೇಮಕವಾಗಿರುವುದರಿಂದ ಸಂಘಟನೆಯ ಕಾರ್ಯಕರ್ತ ರಲ್ಲಿ ಹೊಸ ಹುಮ್ಮಸ್ಸು ಮೂಡಿದೆ ಹಾಗೂ ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿ ಅಧ್ಯಕ್ಷ ಬಿಟ್ಟಿ ನೆಡುನಿಲಂ ಅವರು ಗುರುಗಳ ನೇಮಕಾತಿಯನ್ನು ಸ್ವಾಗತ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ಸಂಘಟನೆ ಇನ್ನಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ. ನೂತನ ನಿರ್ದೇಶಕರಾಗಿರುವ ಫಾ. ಆದರ್ಶ್ ಅವರು ಸದ್ಯ ಗುತ್ತಿಗಾರು, ನೆಟ್ಟಣ ಧರ್ಮ ಕೇಂದ್ರಗಳ ಧರ್ಮ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Related posts

ಶೃಂಗೇರಿ ಮಹಾಸಂಸ್ಥಾನದ ಜಗದ್ಗುರು ಶ್ರೀ ಭಾರತಿ ತೀರ್ಥ ಸ್ವಾಮೀಜಿಯವರಿಗೆ ವಾಣಿ ಶಿಕ್ಷಣ ಸಂಸ್ಥೆಯ ನೂತನ ಕಟ್ಟಡ ಮತ್ತು ಸಭಾಭವನ ಉದ್ಘಾಟನೆಯ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ

Suddi Udaya

ಪಾಲೇದು ಗ್ರಾಮಸ್ಥರ ಸುಭಿಕ್ಷೆಗಾಗಿ ಪ್ರಶ್ನಾ ಚಿಂತನೆ

Suddi Udaya

ಗೆಜ್ಜೆಗಿರಿ ಯಕ್ಷಗಾನ ಮೇಳದ ಪ್ರಧಾನ ಸಂಚಾಲಕರಾಗಿ ಪ್ರಮಲ್ ಕುಮಾರ್ ಕಾರ್ಕಳ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆಯಿಂದ ಕಾಯರ್ತಡ್ಕದ ಅಂಬಿಕಾ ರವರಿಗೆ ವಾತ್ಸಲ್ಯ ಮನೆ ಹಸ್ತಾಂತರ

Suddi Udaya

ಶ್ರೀ ರಾಮಕ್ಷೇತ್ರದಲ್ಲಿ 63ನೇ ವರ್ಷದ ಶ್ರೀರಾಮ ತಾರಕ ಮಂತ್ರ ಸಪ್ತಾಹಕ್ಕೆ ಚಾಲನೆ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಂದಾದೀಪವನ್ನು ಬೆಳಗಿಸಿದ ಶಾಸಕ ಹರೀಶ್ ಪೂಂಜ

Suddi Udaya

ಅನಘ ಮನೆಯ ಕಳ್ಳತನ ಪ್ರಕರಣ ಶೀಘ್ರವಾಗಿ ಭೇದಿಸುವಂತೆ ವೇಣೂರು ಪೊಲೀಸ್ ಠಾಣೆಗೆ ಕುತ್ಲೂರು ಗ್ರಾಮದ ಮಹಿಳೆಯರಿಂದ ಮನವಿ

Suddi Udaya
error: Content is protected !!