ಸುಲ್ಕೇರಿ: ಶ್ರೀ ನೇಮಿನಾಥ ಸ್ವಾಮಿ ಬಸದಿಯ ನೂತನ ಗೋಪುರದ ಶಿಲಾನ್ಯಾಸ

Suddi Udaya

ಸುಲ್ಕೇರಿ : ಶ್ರೀ ನೇಮಿನಾಥ ಸ್ವಾಮಿ ಬಸದಿ ಜೀರ್ಣೋದ್ಧಾರಗೊಳ್ಳುತ್ತಿದ್ದು ಬಸದಿಯ ನೂತನ ಗೋಪುರದ ಶಿಲಾನ್ಯಾಸ ಸಮಾರಂಭ ಜು. 9 ರಂದು ಸುಲ್ಕೇರಿ ಬಸದಿಯಲ್ಲಿ ನಡೆಯಿತು.


ಪುರೋಹಿತರ ಧಾರ್ಮಿಕ ಪೂಜೆಗಳೊಂದಿಗೆ ಪ್ರಾರಂಭಗೊಂಡ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಕೆ.ಹರೀಶ್ ಕುಮಾರ್, ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲರು, ಮೂಡಬಿದ್ರೆ ಎಕ್ಸ್ ಲೆಂಟ್ ಶಿಕ್ಷಣ ಸಂಸ್ಥೆಯ ಯುವರಾಜ ಜೈನ್, ನೂರಾಳ್ ಬೆಟ್ಟು ಜಯಧವಳದ ವಿಜಯ ಕುಮಾರ್ ಜೈನ್, ಮನ್ಮಥ ಕುಮಾರ್ ನೆಲ್ಲಿಕಾರು, ಸತೀಶ್ ಪಡಿವಾಳ್ ಪುತ್ತೂರು ಭಾಗವಹಿಸಿ ಬಸದಿಯ ಕೆಲಸ ಕಾರ್ಯಗಳಿಗೆ ಸಹಾಯ ಮಾಡುವುದರೊಂದಿಗೆ ಶುಭ ಕೋರಿದರು.


ಈ ಸಂದರ್ಭದಲ್ಲಿ ಗಣ್ಯರನ್ನು ಬಸದಿಯ ವತಿಯಿಂದ ಗೌರವಿಸಲಾಯಿತು.
ಆಡಳಿತ ಸಮಿತಿಯ‌ ಮೊಕ್ತೇಸರರಾದ ಎನ್.ರವಿರಾಜ ಹೆಗ್ಡೆ ನಾವರ ಗುತ್ತು ಮತ್ತು ಸಮಸ್ತ ಜೈನ ಭಾಂಧವರು ಭಾಗವಹಿಸಿದ್ದರು.

Leave a Comment

error: Content is protected !!