July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಿಕ್ಷಣ ಸಂಸ್ಥೆ

ನಿಡ್ಲೆ ನಾಗೇಶ್ ಕುಮಾರ್ ಕೆ.ಎಂ ಅಭಿಮಾನಿ ಬಳಗದಿಂದ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ, ಕೊಡೆ ಹಾಗೂ ಹಣ್ಣು ಹಂಪಲು ಸಸಿಗಳ ವಿತರಣೆ

ನಿಡ್ಲೆ: ನಾಗೇಶ್ ಕುಮಾರ್ ಕೆ.ಎಂ ಅಭಿಮಾನಿ ಬಳಗದ ವತಿಯಿಂದ ಸರಕಾರಿ ಪ್ರೌಢ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ನಿಡ್ಲೆ ಹಾಗೂ ಅಂಗನವಾಡಿ ಕೇಂದ್ರ ನಿಡ್ಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿ ಹಾಗೂ ಇಲ್ಲಿಯ ಅಂಗನವಾಡಿ ಕೇಂದ್ರಗಳಿಗೆ ಶಾಲಾ ಪಠ್ಯಕ್ಕೆ ಉಪಯೋಗವಾಗುವಂತಹ ಪುಸ್ತಕ, ಪೆನ್, ಪೆನ್ಸಿಲ್, ಕೊಡೆ ಹಾಗೂ ಹಣ್ಣು ಹಂಪಲು ಇನ್ನಿತರ ವಸ್ತುಗಳನ್ನು ಉಚಿತವಾಗಿ ಜು.10 ರಂದು ವಿತರಿಸಲಾಯಿತು.

ಇವರು ಹತ್ತು ಹಲವಾರು ಸಮಾಜಮುಖಿ ಕಾರ್ಯಗಳ ಮೂಲಕ ತಾಲೂಕಿನ ಗಮನ ಸೆಳೆಯುತ್ತಿರುವ ನಿಡ್ಲೆ ಗ್ರಾಮದ ಯುವ ಉದ್ಯಮಿ ಕೆ.ಎಂ ನಾಗೇಶ್ ಕುಮಾರ್ ಇವರು ಶೈಕ್ಷಣಿಕ ಸಾಮಾಜಿಕ ಕಾರ್ಯಗಳ ಮುಖೇನ ಬಡವರ ಪಾಲಿನ ಆಶಾಕಿರಣವಾಗಿದ್ದಾರೆ. ಇವರು ಸ್ವಾಮೀಪ್ರಸಾದ್ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ಹಲವಾರು ಜನರಿಗೆ ಉದ್ಯೋಗ ನೀಡಿ, ಬಡವರ ಪಾಲಿನ ಆಶಾಕಿರಣವಾಗಿದ್ದಾರೆ.


ಈ ಸಂದರ್ಭದಲ್ಲಿ ಆಯೋಜಕರಾದ ನಾಗೇಶ್ ಕುಮಾರ್, ಬೆಸ್ಟ್ ಪೌಂಡೇಶನ್ ಇದರ ಅಧ್ಯಕ್ಷ ರಕ್ಷಿತ್ ಶಿವರಾಂ, ಸುಧಾ ನಾಗೇಶ್ ಕುಮಾರ್ ಹಾಗೂ ನಾಗೇಶ್ ಕುಮಾರ್ ಅಭಿಮಾನಿ ಬಳಗದ ಉಸ್ತುವಾರಿಗಳಾದ ಉಮೇಶ್ ಬಂಗೇರ ಕಾಪಿನಡ್ಕ, ಅಶಿಪ್ ಐಡಿಯಲ್, ಧನುಷ್ ನಿಡ್ಲೆ ,ಅಶ್ವಿನ್ ಕಿರಣ್ ,ಹರಿಶ್ಚಂದ್ರ, ಗಣೇಶ್ ಪಿಜಿನಡ್ಕ, ಅಚ್ಯುತ್ ನಾಯ್ಕ, ಉಸ್ಮಾನ್ ಲಿಯೋ ಮೊಂತೆರೋ, ಆರಿಫ್ ಶಪ್ವಾನ್ ಹಾಗೂ ಕಲಂದರ್ ಎಂ ಎಚ್ ಉಪಸ್ಥಿತರಿದ್ದರು.

Related posts

ಉಜಿರೆ: ಶ್ರೀ ಧ. ಮಂ. ಪ.ಪೂ. ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

Suddi Udaya

ಮುಂಡಾಜೆಯ ತಿರುವಿನ ಬಳಿ ಮೋರಿಗೆ ಜಾರಿದ ಕಾರು

Suddi Udaya

ರಾಜ್ಯಮಟ್ಟದ ಸ್ಕ್ವೇಯ್ ಮಾರ್ಸಲ್ ಆರ್ಟ್ಸ್ ಸ್ಪರ್ಧೆ: ಶಹೀರ್ ಅನಸ್ ರವರಿಗೆ ಚಿನ್ನದ ಪದಕ

Suddi Udaya

ಶ್ರೀ ಧ.ಮಂ ಪ.ಪೂ ಕಾಲೇಜಿನಲ್ಲಿ ” ಭಿತ್ತಿಪತ್ರಿಕೆ ಅನಾವರಣ “

Suddi Udaya

ಕಾರಿಂಜ ವನಶಾಸ್ತಾರ, ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮಕಲಶದ ಚಪ್ಪರ ಮೂಹೂರ್ತ, ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದಿಂದ ಉಜಿರೆ ಶ್ರೀ ಧ. ಮ.ಕಾಲೇಜಿನ ಪ್ರಾಂಶುಪಾಲ ಕುಮಾರ್ ಹೆಗ್ಡೆ ಯವರಿಗೆ ಸನ್ಮಾನ

Suddi Udaya
error: Content is protected !!