September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದಿಂದ ಕ್ಷೇಮ ನಿಧಿ ಯೋಜನೆಯ 10 ನೇ ಸಹಾಯಧನ ಹಸ್ತಾಂತರ

ಬೆಳ್ತಂಗಡಿ : ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘ ತಾಲೂಕು ಸಮಿತಿ ಇದರ ರಿಕ್ಷಾ ಚಾಲಕರ ಆಪತ್ಕಾಲದ ನೆರವಿನ ಕ್ಷೇಮ ನಿಧಿ ಯೋಜನೆಯ 10ನೇ ಸಹಾಯಧನವನ್ನು ನಿಡ್ಲೆ ಗ್ರಾಮದ ಬರೆಂಗಾಯ ವನದುರ್ಗಾ ರಿಕ್ಷಾ ಚಾಲಕರ ಸಂಘದ ಸದಸ್ಯರಾದ ರಾಜೇಶ್ ಬರೆಂಗಾಯ ಇವರ ರಿಕ್ಷಾ ಅಪಘಾತದಲ್ಲಿ ಇವರಿಗೆ ಗಾಯಗಳಾಗಿ ಬೆನಕ ಆಸ್ಪತ್ರೆ ಉಜಿರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಮಾಡುತ್ತಿದ್ದಾರೆ. ಇವರಿಗೆ ಕ್ಷೇಮ ನಿಧಿ ರೂ 5,000/ವನ್ನು ಹಸ್ತಾಂತರಿಸಲಾಯಿತು

ಈ ಸಂದರ್ಭದಲ್ಲಿ ನೇತಾಜಿ ಆಟೋ ಚಾಲಕ ಮಾಲಕರ ಸಂಘ ಕಾಯರ್ತಡ್ಕ ಸಂಘದ ಮಾಜಿ ಆಧ್ಯಕ್ಷರು ಹಾಗೂ ಕಳೆಂಜ ಬಿಎಂಎಸ್ ಗ್ರಾಮ ಸಮಿತಿ ಅಧ್ಯಕ್ಷ ಉಮೇಶ್ ಕಾಯರ್ತಡ್ಕ ,ಬರೆಂಗಾಯ ರಿಕ್ಷಾ ಚಾಲಕ ಸಂಘದ ಅಧ್ಯಕ್ಷ ಶಿವರಾಮ ಬರೆಂಗಾಯ, ಕಾರ್ಯದರ್ಶಿ ದೀಕ್ಷಿತ್ ಬರೆಂಗಾಯ ಇವರು ಹಸ್ತಾಂತರಿಸಿದರು.

ಸದಸ್ಯರಾದ ಜಗದೀಶ್ ಬರೆಂಗಾಯ. ಅಶ್ವತ್ಥ್ ಬರೆಂಗಾಯ, ಜೀವನ್ ಬರೆಂಗಾಯ,ಮನೋಜ್ ಬರೆಂಗಾಯ ಉಪಸ್ಥಿತರಿದ್ದರು.

Related posts

ಪುದುವೆಟ್ಟು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರದ ಉದ್ಘಾಟನೆ

Suddi Udaya

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಪ್ರಶಸ್ತಿಯ ಗೌರವ

Suddi Udaya

ಮೇಲಂತಬೆಟ್ಟು: ಹಾನಿಗೊಳಗಾದ ಪ್ರದೇಶಗಳಿಗೆ ವಿ.ಪ. ಶಾಸಕ ಪ್ರತಾಪ್ ಸಿಂಹ ನಾಯಕ್ ಭೇಟಿ; ಪರಿಶೀಲನೆ

Suddi Udaya

ನಡ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ ಶ್ರೀಮತಿ ರಾಜೀವಿರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಕುಟುಂಬೋತ್ಸವ: ಜೆಸಿಐ ಮಧ್ಯಂತರ ಸಮ್ಮೇಳನದಲ್ಲಿ ಪ್ರಶಸ್ತಿ ವಿಜೇತರಿಗೆ ಅಭಿನಂದನೆ ಸಲ್ಲಿಕೆ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ ಶಾಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ತಂಡದಿಂದ ಕಮ್ಮಟ – ಬೀದಿ ನಾಟಕ ಪ್ರದರ್ಶನ

Suddi Udaya
error: Content is protected !!