ನಾಪತ್ತೆಯಾಗಿದ್ದ ಬೆಳಾಲು ಮಾಯಾ ಅತ್ರಿಜಾಲು ತಮ್ಮಯ್ಯ ಗೌಡರ ಮೃತ‌ದೇಹ ಕೆರೆಯಲ್ಲಿ ಪತ್ತೆ- ಶವ ಮೇಲೆತ್ತಿದ‌ ಶೌಯ೯ ವಿಪತ್ತು ತಂಡ

Suddi Udaya

ಬೆಳಾಲು : ನಿನ್ನೆ ಬೆಳಿಗ್ಗೆ ಸಾಪತ್ತೆಯಾಗಿದ್ದ ಬೆಳಾಲು ಗ್ರಾಮದ ಮಾಯಾ ಅತ್ರಿಜಾಲು ನಿವಾಸಿಯೋವ೯ರ ಮೃತ‌ದೇಹ ಇಂದು ಕೆರೆಯಲ್ಲಿ ಪತ್ತೆಯಾಗಿದೆ. ‌ಅತ್ರಿಜಾಲು ತಮ್ಮಯ್ಯ ಗೌಡ ( 43ವ) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.

ತಮ್ಮಯ್ಯ ಅವರು ನಿನ್ನೆ ಬೆಳಿಗ್ಗೆ ನಾಪತ್ತೆಯಾಗಿದ್ದು, ಮನೆಯವರು ಎಲ್ಲಾ ಕಡೆ ಹುಡುಕಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇಂದು ಶೌಯ೯ವಿಪತ್ತು ತಂಡದ ಹರೀಶ್ ಕೂಡಿಗೆ, ಸುಲೈಮಾನ್ ಭೀಮಂಡೆ, ಸಂತೋಷ್ ಕನಕಿಲ, ಯಶೋಧರ ಬೆಳಾಲ್ ಹುಡುಕಾಟ ನಡೆಸಿ, ಕೆರೆಯಲ್ಲಿದ್ದ ಶವ ಮೇಲೆತ್ತಿದ್ದಾರೆ.

ಈ ಸಂದಭ೯ ಸಂಯೋಜಕಿ ಆಶಾ ಮೊದಲಾದವರು ಉಪಸ್ಥಿತರಿದ್ದರು. ತಮ್ಮಯ ಗೌಡರು ಕೆರೆಗೆ ಜಾರಿ ಬಿದ್ದರೇ ಅಥವಾ ಆತ್ಮಹತ್ಯೆ ಮಾಡಿಕೊಂಡರೇ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬರಬೇಕಾಗಿದೆ.

Leave a Comment

error: Content is protected !!