ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ದಿನೇಶ್ ಹೊಳ್ಳರವರಿಂದ ಬ್ಯಾಗ್, ಛತ್ರಿ, ಲೇಖನಿ ಸಾಮಾಗ್ರಿ ವಿತರಣೆ

Suddi Udaya

ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅರಸಿನಮಕ್ಕಿ, ಇಲ್ಲಿನ ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಪ್ರೇಮಿಗಳಾದ ಹಾಗೂ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಶ್ರೀ ದಿನೇಶ್ ಹೊಳ್ಳ ರವರು ಉಚಿತ ಛತ್ರಿ, ರೈನ್ ಕೋಟು, ಬ್ಯಾಗ್, ಲೇಖನಿ ಸಾಮಾಗ್ರಿ, ಇನ್ನಿತರ ಅಗತ್ಯ ವಸ್ತುಗಳನ್ನು ಶಾಲೆಯ ಕೊಡುಗೈ ದಾನಿಗಳಾದ ಅವಿನಾಶ್ ಭಿಡೆಯವರ ಉಪಸ್ಥಿತಿಯಲ್ಲಿ ಶಾಲಾ ಸಂಚಾಲಕರಾದ ವಾಮನ್ ತಾಮಣ್ಣಕರ್ ರವರಲ್ಲಿ ನೀಡಿದ್ದು ಅವರ ಅನುಪಸ್ಥಿತಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸೀತಾರಾಮ ಗೌಡ ರವರು ವಿತರಣೆ ಮಾಡಿದರು.

Leave a Comment

error: Content is protected !!