ಕೊಕ್ಕಡ ವಲಯದ ಭಜನಾ ಪರಿಷತ್ ಸಭೆ

Suddi Udaya

ಅರಸಿನಮಕ್ಕಿ : ಕೊಕ್ಕಡ ವಲಯದ ಭಜನಾ ಪರಿಷತ್ ಸಭೆಯನ್ನು, ಅರಸಿನಮಕ್ಕಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಸಲಾಯಿತು.

ಸಭೆಯಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಚಂದ್ರಶೇಖರ ಸಾಲಿಯಾನ್ ರವರು ಕಾರ್ಯಕ್ರಮದ ಉದ್ದೇಶ, ಮೂಲಭೂತ ಸೌಕರ್ಯಗಳ ಬಗ್ಗೆ, 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ಸೇರುವ ಬಗ್ಗೆ, ನಮ್ಮ ಸಂಪ್ರದಾಯದಲ್ಲಿ ಭಜನೆಗೆ ಇರುವ ಮಹತ್ವದ ಬಗ್ಗೆ ಸವಿವಾರವಾಗಿ ಮಾಹಿತಿಯನ್ನು ನೀಡಿದರು.

ನಂತರದಲ್ಲಿ ಭಜನಾಪರಿಷತ್ ಕೊಕ್ಕಡ ವಲಯದ ಸಂಯೋಜಕರು ಕೃಷ್ಣಪ್ಪ ರವರು ಪ್ರಥಮವಾಗಿ ಎಲ್ಲರಿಗೂ ವಂದಿಸಿ, ಪೂಜ್ಯಖಾವಂದರಿಗೆ ಭಜನಾ ಮಂಡಳಿಗಳ ಮೇಲೆ ಇರುವ ಅಭಿಮಾನದ ಬಗ್ಗೆ, ವಲಯದಲ್ಲಿ ಮುಂದಿನ ದಿನಗಳಲ್ಲಿ ಭಜನಾ ಮಂಡಳಿಗಳು ಒಗ್ಗಟ್ಟಿನಲ್ಲಿ ಇದ್ದು ಉತ್ತಮವಾಗಿ ಸಂಘಟನೆಯನ್ನು ಮಾಡಿ ನಮ್ಮ ಬೆಳ್ತಂಗಡಿ ತಾಲೂಕಿನಲ್ಲಿ ವಲಯದಲ್ಲಿ ಎಲ್ಲಾ ಭಜನಾ ಮಂಡಳಿಗಳು ಕ್ರಿಯಾಶೀಲಾ ಇರುವ ಹಾಗೆ ನಾವೆಲ್ಲರೂ ಪ್ರಯತ್ನ ಪಡೋಣ ಎಂದು ಶುಭವನ್ನು ಹಾರೈಸಿದರು.

ಸಭೆಯಲ್ಲಿ ವಲಯ ಮೇಲ್ವಿಚಾರಕರಾದ ಶ್ರೀಮತಿ ಭಾಗೀರಥಿ ವಲಯದ ಎಲ್ಲಾ ಭಜನಾ ಪರಿಷತ್ ನ ಪದಾಧಿಕಾರಿಗಳು ಮತ್ತು ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Comment

error: Content is protected !!