April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಗಿಡ ನಾಟಿ ಉತ್ಸವ

ಬೆಳ್ತಂಗಡಿ : ರೋಟರಿ ಕ್ಲಬ್ ಇದರ ವನಸಿರಿ ಕಾರ್ಯಕ್ರಮದಲ್ಲಿ ಮಿತ್ತಬಾಗಿಲು, ಮಲವಂತಿಗೆ, ಕಡಿರುದ್ಯಾವರ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ ರೋಟರಿ ಮಂಗಳೂರು ಡೌನ್ ಟೌನ್, ಮುಂಡಾಜೆ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್, ರೇಂಜರ್ಸ್, ರೋವರ್ಸ್ ತಂಡಗಳ ಸಹಕಾರದಲ್ಲಿ ಗಿಡ ನಾಟಿ ಹಾಗೂ ಬಿತ್ತೋತ್ಸವ ನಡೆಸಲಾಯಿತು. ಜು.16 ರಂದು ನಡೆಯಿತು.

ಹತ್ತು ಬಗೆಯ ವಿವಿಧ ಹಣ್ಣುಗಳ 100 ಗಿಡಗಳ ನಾಟಿ ಹಾಗೂ 25,000ಕ್ಕೂ ಅಧಿಕ ಬೀಜಗಳನ್ನು ಬಿತ್ತಲಾಯಿತು.

ರೋಟರಿ ಜಿಲ್ಲಾ ಕಾರ್ಯದರ್ಶಿ (ತರಬೇತಿ) ಹರೀಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಅನಂತ ಭಟ್, ಕಾರ್ಯದರ್ಶಿ ವಿದ್ಯಾ ಕುಮಾರ್, ಕುಲಸಚಿವರು ಶ್ರೀಕಾಂತ್ ಕಾಮತ್, ಧನಂಜಯ ರಾವ್, ಶ್ರೀಧರ್, ಪ್ರಕಾಶ್ ನಾರಾಯಣ್, ಕುಲಪತಿ ಡಾ. ರೋ. ಕಿರಣ್ ಹೆಬ್ಬಾರ್, ರೋ. ವಿವೇಕ್ ಸಂಪತ್ ಅರಿಗ, ರೋ. ನಾರಾಯಣ ಭಿಡೆ, ರೋ. ಉದಯಶಂಕರ್, ರೋ. ಅಬೂಬಕ್ಕರ್ & Anns, Annets, ರೋಟರಿ ಮಂಗಳೂರು ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರು, ಅರಣ್ಯ ವೀಕ್ಷಕರು ಉಪಸ್ಥಿತರಿದ್ದರು.

150ಕ್ಕೂ ಅಧಿಕ ಭತ್ತದ ತಳಿಗಳ ಸಂರಕ್ಷಣೆ ಮಾಡಿರುವ ಹಿರಿಯ ಕೃಷಿಕ ಮಿತ್ತಬಾಗಿಲಿನ ದೇವರಾಜ್ ಬಿ.ಕೆ. ಅವರನ್ನು ಗೌರವಿಸಲಾಯಿತು.

Related posts

ಸುಳ್ಳು ಆರೋಪ ಹೊರಿಸಿ, ಕ್ಷೇತ್ರದ ಮಾನಹಾನಿ ಮಾಡುವ ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಅಗತ್ಯ ಕಾನೂನು ಕ್ರಮಕ್ಕೆ ಒತ್ತಾಯಿಸಿ ಮಾ.27 ರಂದು ಧರ್ಮಸ್ಥಳದಲ್ಲಿ ಒಂದು ದಿನದ ಹರತಾಳ ಮತ್ತು ಪ್ರತಿಭಟನಾ ಸಭೆ

Suddi Udaya

ಶ್ರೀ ಧ.ಮಂ ಪ.ಪೂ ಕಾಲೇಜು : ಪಂಚಪ್ರಾಣ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ

Suddi Udaya

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದ ಉದ್ಘಾಟನಾ ಸಮಾರಂಭ

Suddi Udaya

ಬಳಂಜದಲ್ಲಿ ಟಿಪ್ಪರ್ ಪತ್ತೆ: ವೇಣೂರು ಪೊಲೀಸ್ ಠಾಣೆಗೆ ದೂರು

Suddi Udaya

ಇಂದಬೆಟ್ಟು ಗ್ರಾ.ಪಂ. ನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Suddi Udaya

ದ.ಕ ಜಿಲ್ಲಾ ಖಾಝಿ ಫಝಲ್ ಕೋಯಮ್ಮ ಕೂರ ತಂಙಲ್ ನಿಧನ

Suddi Udaya
error: Content is protected !!