April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮೊಗ್ರು: ಕಡಮ್ಮಾಜೆ ಫಾರ್ಮ್ಸ್ ನಲ್ಲಿ ಮೀನು ಮೇಳ

ಮೊಗ್ರು : ಒಬ್ಬ ಕೃಷಿಕ ಹೇಗೆ ಲಾಭದಾಯಕವಾಗಿ ಹಾಗೂ ಪ್ರೇರಣದಾಯಿಯಾಗಿ ಕೃಷಿ ಮಾಡಬಹುದು ಎಂಬುದನ್ನು ಸಮಾಜಕ್ಕೆ ತೋರಿಸಿಕೊಡುವಂತಹ ಕೆಲಸವನ್ನು ಮಾಡಿದ್ದಾರೆ ಎಂದು ಶಾಸಕ ಹರೀಶ್ ಪೂಂಜಾರವರು ಹೇಳಿದರು.

ಅವರು ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಕಡಮ್ಮಾಜೆ ಫಾರ್ಮ್ಸ್ ನಲ್ಲಿ ಜು.16 ಮತ್ತು 17 ರಂದು ನಡೆದ ಮೀನು ಮೇಳಕ್ಕೆ ಆಗಮಿಸಿ ಮಾತನಾಡಿದರು.

ಈ ಮೇಳವನ್ನು ಈ ರಾಜ್ಯದ ದೇಶದ ಜನರು ವೀಕ್ಷಿಸಿದರೆ ಎಲ್ಲರಿಗೂ ಇದೊಂದು ಮಾದರಿ ಹಾಗೂ ಬದುಕಿಗೆ ಶಕ್ತಿಯಾಗುತ್ತದೆ, ಕಡಮ್ಮಾಜೆ ಫಾರ್ಮ್ಸ್ ಕೃಷಿಕರಿಗೆ ಹಾಗೂ ಯುವಕರಿಗೆ ಪ್ರೇರಣೆಯಾಗಿದೆ ಎಂದರು.


ಕಡಮ್ಮಾಜೆ ಮಾಲಕರಾದ ದೇವಿಪ್ರಸಾದ್ ಮತ್ತು ಜಯಪ್ರಸಾದ್ ಅವರ ಮನೆಯಲ್ಲಿ ಎರಡು ದಿನಗಳ ಮೀನುಮೇಳ ನಡೆಯಿತು. ಮೇಳದಲ್ಲಿ ಬಗೆ ಬಗೆಯ ಸಿಹಿ ಮೀನುಗಳಾದ ಮಡೆಂಜಿ ಮೀನು, ತಿಲಾಪಿಯಾ ಮೀನು, ಪಂಗಾಸಿಯಸ್ ಮೀನು ಮತ್ತು ವಿವಿಧ ರೀತಿಯ ಪಕ್ಷಿಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಿದ್ದರು. ಮೀನು ಮೇಳಕ್ಕೆ ಆಗಮಿಸಿದ ಜನರು ತಮಗೆ ಬೇಕಾದ ಮೀನನ್ನು ಖರೀದಿಸುವ ಮೂಲಕ ಉತ್ತಮ ಅವಕಾಶವನ್ನು ಬಳಸಿಕೊಂಡರು.

Related posts

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಐಕ್ಸ್ ದ್ವಿಮಾಸಿಕ ಸಭೆ

Suddi Udaya

ಲಾಯಿಲ: ಶಿವಪ್ಪ ಬೆರ್ಕೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆ

Suddi Udaya

ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ:ಸಹಕಾರಿ ಭಾರತಿ ಬಿಜೆಪಿ ಬೆಂಬಲಿತ- 11 ಸ್ಥಾನ ಸೌಹಾರ್ದ ಸಹಕಾರಿ ಬಂಧುಗಳ ಒಕ್ಕೂಟಕ್ಕೆ 1- ಸ್ಥಾನ: ನ್ಯಾಯಾಲಯದ ಆದೇಶದಂತೆ ಫಲಿತಾಂಶ ಘೋಷಣೆಗೆ ತಡೆ

Suddi Udaya

ಉಡುಪಿ ಹಾಗೂ ದ.ಕ. ಜಿಲ್ಲಾ ಭಾರತೀಯ ಅರಸೇನಾಪಡೆಗಳ ಮಾಜಿ ಯೋಧರ ಸಂಘದ ವಾರ್ಷಿಕ ಸಭೆ, ಪ್ರತಿಭಾ ಪುರಸ್ಕಾರ, ಮಾಜಿ ಯೋಧರ ಕುಟುಂಬ ಸಮ್ಮಿಲನ ಹಾಗೂ ಮನೋರಂಜನಾ ಕಾರ್ಯಕ್ರಮ

Suddi Udaya

ಉಜಿರೆ ಎರ್ನೋಡಿಯಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya
error: Content is protected !!