ಜೆಸಿಂತಾ ಡಿ ಸೋಜ ಅವರಿಗೆ ಉದ್ಯೋಗ ರತ್ನ ಪ್ರಶಸ್ತಿ: ಜೆಸಿಐ ಕೊಕ್ಕಡ ಕಪಿಲಾ ಘಟಕಕ್ಕೆ ಪ್ರಶಸ್ತಿಗಳ ಗರಿ

Suddi Udaya

ಕೊಕ್ಕಡ: ಹಾಲಾಡಿಯಲ್ಲಿ ಜರುಗಿದ ವಲಯ ಮಟ್ಟದ ಸಮ್ಮೇಳನದಲ್ಲಿ ಕೊಕ್ಕಡ ಕಪಿಲಾ ಘಟಕದ ಹಿರಿಯ ಸದಸ್ಯರಾದ ಜೆಸಿಂತಾ ಡಿ ಸೋಜ ಅವರಿಗೆ ಪಂಚರತ್ನ ಪುರಸ್ಕಾರ ಅನ್ವಯ ಉದ್ಯೋಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜೆಸಿಐ ಶಂಕರನಾರಾಯಣ ಘಟಕದ ಆತಿಥ್ಯದಲ್ಲಿ ಜು. 23 ರಂದು ಶ್ರೀಮತಿ ಶಾಲಿನಿ ಜಿ. ಶಂಕರ ಕನ್ವೆನ್ಷನ್ ಸೆಂಟರ್, ಇದರಲ್ಲಿ ವಲಯ 15 ಇದರ ಅಭಿವೃದ್ಧಿ ಮತ್ತು ವ್ಯವಹಾರ ಸಮ್ಮೇಳನ ಜರುಗಿತು.ಕೊಕ್ಕಡ ಘಟಕ ಅಧ್ಯಕ್ಷ ಜಿತೇಶ್ ಎಲ್ ಪಿರೇರಾ ಅವರಿಗೆ ಈ ವರ್ಷ ಮಾಡಿದ ಸಾಧನೆಗೆ ಶೈನಿಂಗ್ ಪವರ್ ಸ್ಟಾರ್ ಅಧ್ಯಕ್ಷರು ಹಾಗೂ ಟಾಪ್ 8 ಘಟಕ ಎಂಬ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ವಲಯಾಧ್ಯಕ್ಷ ಶ್ರೀ ಪುರುಷೋತ್ತಮ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ರಾಯನ್ ಉದಯ ಕ್ರಾಸ್ತಾ, ವ್ಯವಹಾರ ವಿಭಾಗದ ನಿರ್ದೇಶಕರಾದ ನಾಗರಾಜ್ ಪೂಜಾರಿ, ವಲಯ ಆಡಳಿತ ಮಂಡಳಿಯ ಮರಿಯಪ್ಪ, ಉಷಾ ಕಲ್ಮಾಡಿ, ವಲಯ ಉಪಾಧ್ಯಕ್ಷರು, ಕೊಕ್ಕಡ ಕಪಿಲಾ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Comment

error: Content is protected !!