September 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜೆಸಿಂತಾ ಡಿ ಸೋಜ ಅವರಿಗೆ ಉದ್ಯೋಗ ರತ್ನ ಪ್ರಶಸ್ತಿ: ಜೆಸಿಐ ಕೊಕ್ಕಡ ಕಪಿಲಾ ಘಟಕಕ್ಕೆ ಪ್ರಶಸ್ತಿಗಳ ಗರಿ

ಕೊಕ್ಕಡ: ಹಾಲಾಡಿಯಲ್ಲಿ ಜರುಗಿದ ವಲಯ ಮಟ್ಟದ ಸಮ್ಮೇಳನದಲ್ಲಿ ಕೊಕ್ಕಡ ಕಪಿಲಾ ಘಟಕದ ಹಿರಿಯ ಸದಸ್ಯರಾದ ಜೆಸಿಂತಾ ಡಿ ಸೋಜ ಅವರಿಗೆ ಪಂಚರತ್ನ ಪುರಸ್ಕಾರ ಅನ್ವಯ ಉದ್ಯೋಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜೆಸಿಐ ಶಂಕರನಾರಾಯಣ ಘಟಕದ ಆತಿಥ್ಯದಲ್ಲಿ ಜು. 23 ರಂದು ಶ್ರೀಮತಿ ಶಾಲಿನಿ ಜಿ. ಶಂಕರ ಕನ್ವೆನ್ಷನ್ ಸೆಂಟರ್, ಇದರಲ್ಲಿ ವಲಯ 15 ಇದರ ಅಭಿವೃದ್ಧಿ ಮತ್ತು ವ್ಯವಹಾರ ಸಮ್ಮೇಳನ ಜರುಗಿತು.ಕೊಕ್ಕಡ ಘಟಕ ಅಧ್ಯಕ್ಷ ಜಿತೇಶ್ ಎಲ್ ಪಿರೇರಾ ಅವರಿಗೆ ಈ ವರ್ಷ ಮಾಡಿದ ಸಾಧನೆಗೆ ಶೈನಿಂಗ್ ಪವರ್ ಸ್ಟಾರ್ ಅಧ್ಯಕ್ಷರು ಹಾಗೂ ಟಾಪ್ 8 ಘಟಕ ಎಂಬ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ವಲಯಾಧ್ಯಕ್ಷ ಶ್ರೀ ಪುರುಷೋತ್ತಮ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ರಾಯನ್ ಉದಯ ಕ್ರಾಸ್ತಾ, ವ್ಯವಹಾರ ವಿಭಾಗದ ನಿರ್ದೇಶಕರಾದ ನಾಗರಾಜ್ ಪೂಜಾರಿ, ವಲಯ ಆಡಳಿತ ಮಂಡಳಿಯ ಮರಿಯಪ್ಪ, ಉಷಾ ಕಲ್ಮಾಡಿ, ವಲಯ ಉಪಾಧ್ಯಕ್ಷರು, ಕೊಕ್ಕಡ ಕಪಿಲಾ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿಯಲ್ಲಿ ವಿಶ್ವ ಡೆಂಗ್ಯೂ ದಿನಾಚರಣೆ ಪ್ರಯುಕ್ತ ಕಾಲ್ನಡಿಗೆ ಜಾಥಾ

Suddi Udaya

ಉಜಿರೆ ಎಸ್‌ಡಿಎಂ ಪಾಲಿಟೆಕ್ನಿಕ್ ನಲ್ಲಿ ಬೋಶ್ ಇಂಟರ್ನ್‌ಶಿಪ್ ಆಯ್ಕೆ ಪ್ರಕ್ರಿಯೆ

Suddi Udaya

ಸೆ.6: ರೆಖ್ಯದಲ್ಲಿ 24ನೇ ವರ್ಷದ ಮೊಸರು ಕುಡಿಕೆ ಉತ್ಸವ

Suddi Udaya

ವಾಣಿ ವಿದ್ಯಾ ಸಂಸ್ಥೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ದಾಖಲಾತಿ ಪ್ರಕ್ರಿಯೆ ಆರಂಭ

Suddi Udaya

ಚಾರ್ಮಾಡಿ ಜಾರುವ ರಸ್ತೆಗೆ ಮತ್ತೆ ರಫಿಂಗ್

Suddi Udaya
error: Content is protected !!