July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪೆರಾಲ್ದರಕಟ್ಟೆ ಸ್ವಲಾತ್ ಕಮಿಟಿ ನೂತನ ಆಡಳಿತ ಸಮಿತಿ ರಚನೆ

ಬದ್ರೀಯಾ ಜುಮಾ ಮಸೀದಿ ಪೆರಾಲ್ದರಕಟ್ಟೆ ಇದರ ಅಂಗ ಸಂಸ್ಥೆಯಾದ ಸ್ವಲಾತ್ ಕಮಿಟಿ ಪೆರಾಲ್ದರಕಟ್ಟೆ ಇದರ ವಾರ್ಷಿಕ ಮಹಾಸಭೆಯು ಜು. 21ರಂದು ಶಾದಿಮಹಲ್‌ ಸಭಾಂಗಣ ಪೆರಾಲ್ದರಕಟ್ಟೆಯಲ್ಲಿ ಬದ್ರಿಯಾ ಆಡಳಿತ ಸಮಿತಿ ಪೆರಾಲ್ದರಕಟ್ಟೆ ಇದರ ಅಧ್ಯಕ್ಷರಾದ ನವಾಜ್ ಶರೀಫ್ ಕಟ್ಟೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಳೆದ ಆಡಳಿತಾವಧಿಯ ಅಭಿವೃದ್ಧಿ ಕಾರ್ಯಗಳನ್ನು ಸ್ವಲಾತ್ ಕಮಿಟಿ ಅಧ್ಯಕ್ಷರಾದ ದಾವೂದ್ ಸಾಹೇಬ್ ಮಂಜೋಟ್ಟಿ ಇವರು ವಿವರಿಸಿದರು ಹಾಗೂ 2022-23ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಪ್ರದಾನ ಕಾರ್ಯದರ್ಶಿ ಪಿ.ಕೆ ಆದಂ ಮಂಜೋಟ್ಟಿ ಮಂಡಿಸಿದರು.

ಸಭೆಯಲ್ಲಿ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ಸಿದ್ದಿಕ್ ಮಸೀದಿಬಳಿ ಆಯ್ಕೆಯಾದರು, ಗೌರವ ಅಧ್ಯಕ್ಷ‌ರಾಗಿ ಅಬ್ದುಲ್ ಕರೀಂ ಕಾರಂದೂರು, ಪ್ರಧಾನ ಕಾರ್ಯದರ್ಶಿ ‌ಯಾಗಿ ಹಮೀದ್ ಬಾವಿಬಳಿ, ಕೋಶಾಧಿಕಾರಿಯಾಗಿ ದಾವೂದ್ ಸಾಹೇಬ್ ಮಂಜೋಟ್ಟಿ, ಉಪಾಧ್ಯಕ್ಷರಾಗಿ ಹಸನ್ ಗಿಂಡಾಡಿ ಮತ್ತು ಸಿರಾಜ್ ಮಂಜೋಟ್ಟಿ , ಕಾರ್ಯದರ್ಶಿಯಾಗಿ ಪಿ.ಕೆ.ಶಮದ್ ಕಟ್ಟೆ ಆಯ್ಕೆಯಾದರು.

ಪ್ರಸ್ತುತ ಸಾಲಿನ ಆಡಳಿತ ಸಮಿತಿಯ ಸದಸ್ಯರಾಗಿ ಪಿ.ಕೆ ಆದಂ ಮಂಜೋಟ್ಟಿ , ಶಮೀಮ್ ಮದ್ದಡ್ಕ, ಸುಲೈಮಾನ್ ಕಟ್ಟೆ, ಬಶೀರ್ ಮಸೀದಿಬಳಿ, ಇಬ್ರಾಹಿಂ ತಮುನಾಕ ಮಂಜೋಟ್ಟಿ, ನವಾಜ್ ಶರೀಫ್ ಕಟ್ಟೆ, ಸಾದಿಕ್ ಮಸೀದಿ ಬಳಿ, ಬಶೀರ್ ವೇಣೂರು, ಕಮರುದ್ದೀನ್ ಮಸೀದಿ ಬಳಿ ಮತ್ತು ಪಿ.ಕೆ ಶರೀಫ್ ಮಂಜೋಟ್ಟಿ ಆಯ್ಕೆಯಾದರು.

Related posts

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗಾಗಿ ಆರೋಗ್ಯ ಹಾಗೂ ಸುರಕ್ಷತಾ ಜಾಗೃತಿ ಕಾರ್ಯಾಗಾರ

Suddi Udaya

ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ

Suddi Udaya

ಬೆಳ್ತಂಗಡಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸ್ಥಳೀಯ ಸಂಸ್ಥೆಯ ಜಿಲ್ಲಾ ಮಟ್ಟದ ತೃತೀಯ ಚರಣ ಕಬ್ ಮತ್ತು ಸುವರ್ಣ ಗರಿ ಬುಲ್ ಬುಲ್ ಪರೀಕ್ಷಾ ಶಿಬಿರ

Suddi Udaya

ಕಬಡ್ಡಿ ಪಂದ್ಯಾಟದಲ್ಲಿ ಸುಲ್ಕೇರಿಯ ಶಶಿಕಾಂತ್ ರವರ ವಿಶೇಷ ಸಾಧನೆ: ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆ

Suddi Udaya

ರಾಜ್ಯಮಟ್ಟದ ಸಿಸರ್ ಕಪ್ 2025 ಕ್ರಿಕೆಟ್ ಪಂದ್ಯಾಟ : ಬೆಳ್ತಂಗಡಿ ಭಂಡಾರಿ ಯುವ ವೇದಿಕೆ ತಂಡ ಪ್ರಥಮ

Suddi Udaya

ಕಳೆಂಜ: ಕೊತ್ತೋಡಿ ನಿವಾಸಿ ಸುಂದರ ಗೌಡ ನಿಧನ

Suddi Udaya
error: Content is protected !!