ಮುಂಡಾಜೆ ರಾಷ್ಟ್ರೀಯ ಹೆದ್ದಾರಿಗೆ ಬಿದ್ದ ಮರ ತೆರವು

Suddi Udaya

Updated on:


ಮುಂಡಾಜೆ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಪರಶುರಾಮ ದೇವಸ್ಥಾನದ ಮುಂಭಾಗದಲ್ಲಿ ರಸ್ತೆಗೆ ಬೃಹತ್ ಗಾತ್ರದ ಮರ ಉರುಳಿ ಬಿದ್ದು ಸಂಚಾರ ವ್ಯತ್ಯಯ ಉಂಟಾದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಮುಂಜಾನೆ 4.30ರ ಸುಮಾರಿಗೆ ಮರ ಉರುಳಿ ಬಿದ್ದು 6ಗಂಟೆ ತನಕ ಸಂಚಾರಕ್ಕೆ ಸಮಸ್ಯೆ ಉಂಟಾಯಿತು.
ಮರ ಬಿದ್ದ ರಸ್ತೆ ಬದಿಯಲ್ಲಿ ಪರಶುರಾಮ ದೇವಸ್ಥಾನದ ವಾಹನ ಪಾರ್ಕಿಂಗ್ ಸ್ಥಳ ಇದ್ದು ಸ್ಥಳೀಯರು ಅದರ ಮೂಲಕ ಲಘು ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು.ಬೆಳಿಗ್ಗೆ 8ಗಂಟೆ ಹೊತ್ತಿಗೆ ಮರ ತೆರವು ಕಾರ್ಯ ಪೂರ್ಣಗೊಂಡಿತು.
ಮರವನ್ನು ತೆರೆವುಗೊಳಿಸಲು ಮುಂಡಾಜೆ ಗ್ರಾಪಂ ಸದಸ್ಯ ಹಾಗೂ ಶೌರ್ಯ ವಿಪತ್ತು ತಂಡದ ಸದಸ್ಯ ಜಗದೀಶ್ ನಾಯ್ಕ್, ಗಣೇಶ ಬಂಗೇರ, ಸಚಿನ್ ಭಿಡೆ ಸ್ಥಳೀಯರಾದ ಶೇಖರ್, ಭರತ್, ಅಬೂಬಕ್ಕರ್, ರಶೀದ್, ಕೇಶವಗೊಲ್ಲ,ಅಶೋಕ್ ಮೆಹೆoದಳೆ,ಅಣ್ಣಯ್ಯ,ರಾಘವ, ಸಂಗಮ್ ಲತೀಫ್ , ಅರಣ್ಯ ಇಲಾಖೆಯ ಸಿಬ್ಬಂದಿಸಂತೋಷ್,ಸದಾನಂದ,ಮತ್ತಿತರರು ಸಹಕರಿಸಿದರು.

Leave a Comment

error: Content is protected !!