ಗ್ರಾಮಾಂತರ ಸುದ್ದಿ

ಮುಂಡಾಜೆ ರಾಷ್ಟ್ರೀಯ ಹೆದ್ದಾರಿಗೆ ಬಿದ್ದ ಮರ ತೆರವು


ಮುಂಡಾಜೆ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಪರಶುರಾಮ ದೇವಸ್ಥಾನದ ಮುಂಭಾಗದಲ್ಲಿ ರಸ್ತೆಗೆ ಬೃಹತ್ ಗಾತ್ರದ ಮರ ಉರುಳಿ ಬಿದ್ದು ಸಂಚಾರ ವ್ಯತ್ಯಯ ಉಂಟಾದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಮುಂಜಾನೆ 4.30ರ ಸುಮಾರಿಗೆ ಮರ ಉರುಳಿ ಬಿದ್ದು 6ಗಂಟೆ ತನಕ ಸಂಚಾರಕ್ಕೆ ಸಮಸ್ಯೆ ಉಂಟಾಯಿತು.
ಮರ ಬಿದ್ದ ರಸ್ತೆ ಬದಿಯಲ್ಲಿ ಪರಶುರಾಮ ದೇವಸ್ಥಾನದ ವಾಹನ ಪಾರ್ಕಿಂಗ್ ಸ್ಥಳ ಇದ್ದು ಸ್ಥಳೀಯರು ಅದರ ಮೂಲಕ ಲಘು ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು.ಬೆಳಿಗ್ಗೆ 8ಗಂಟೆ ಹೊತ್ತಿಗೆ ಮರ ತೆರವು ಕಾರ್ಯ ಪೂರ್ಣಗೊಂಡಿತು.
ಮರವನ್ನು ತೆರೆವುಗೊಳಿಸಲು ಮುಂಡಾಜೆ ಗ್ರಾಪಂ ಸದಸ್ಯ ಹಾಗೂ ಶೌರ್ಯ ವಿಪತ್ತು ತಂಡದ ಸದಸ್ಯ ಜಗದೀಶ್ ನಾಯ್ಕ್, ಗಣೇಶ ಬಂಗೇರ, ಸಚಿನ್ ಭಿಡೆ ಸ್ಥಳೀಯರಾದ ಶೇಖರ್, ಭರತ್, ಅಬೂಬಕ್ಕರ್, ರಶೀದ್, ಕೇಶವಗೊಲ್ಲ,ಅಶೋಕ್ ಮೆಹೆoದಳೆ,ಅಣ್ಣಯ್ಯ,ರಾಘವ, ಸಂಗಮ್ ಲತೀಫ್ , ಅರಣ್ಯ ಇಲಾಖೆಯ ಸಿಬ್ಬಂದಿಸಂತೋಷ್,ಸದಾನಂದ,ಮತ್ತಿತರರು ಸಹಕರಿಸಿದರು.

Related posts

ಫೆ.12ರಿಂದ ಮರೋಡಿ ಕ್ಷೇತ್ರದ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೋತ್ಸವ

Suddi Udaya

ಮೆದುಳಿನ ಸ್ಟ್ರೋಕ್ ಸಮಸ್ಯೆಯಿಂದ ಬಳಲುತ್ತಿರುವ ಪಟ್ರಮೆಯ ಲಕ್ಷಣ ಗೌಡ ರವರ ಚಿಕಿತ್ಸೆಗೆ ನೆರವಾಗಿ

Suddi Udaya

ಮಾ.31ರೊಳಗೆ ಶಾಲಾ ಹಳೇ ವಿದ್ಯಾರ್ಥಿಗಳ ಸಂಘ ರಚಿಸುವಂತೆ ಶಿಕ್ಷಣ ಇಲಾಖೆ ಸೂಚನೆ

Suddi Udaya

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ದಿನಾಚರಣೆ

Suddi Udaya

ಬೆಳ್ತಂಗಡಿ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಆಕರ್ಷಕ ಗಿಫ್ಟ್ ಗಳು

Suddi Udaya

ವಾಲ್ಮೀಕಿ ಹಗರಣ ಆರೋಪ: ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯ: ಚಾಮರಾಜನಗರ ಎನ್‌ಕೌಂಟರ್ ತಪ್ಪಿತಸ್ತರ ವಿರುದ್ಧ ಸೂಕ್ತ ಕ್ರಮ: ಬಿಜೆಪಿ ಮಂಡಲದಿಂದ ರಾಜ್ಯಪಾಲರಿಗೆ ಮನವಿ

Suddi Udaya
error: Content is protected !!