ಆ. 13: ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘ ಹಾಗೂ ಆರಂಬೋಡಿ ಯುವ ಬಂಟರ ಸಂಘದ ಆಶ್ರಯದಲ್ಲಿ ‘ಕೆಸರ್‌ಡ್ ಒಂಜಿ ದಿನ’

Suddi Udaya

ಆರಂಬೋಡಿ: ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘ ಹಾಗೂ ಆರಂಬೋಡಿ ಯುವ ಬಂಟರ ಸಂಘದ ಆಶ್ರಯದಲ್ಲಿ ಬಂಟ ಸಮಾಜ ಬಾಂಧವರಿಗೆ ಕೆಸರ್‌ಡ್ ಒಂಜಿ ದಿನ ವಿವಿಧ ಆಟೋಟ ಸ್ಪರ್ಧೆಗಳ ಕ್ರೀಡಾಕೂಟವು ಆ. 13ರಂದು ಬೆಳಿಗ್ಗೆ 9 ಗಂಟೆಯಿಂದ ಆರಂಬೋಡಿಯ ಹಕ್ಕೇರಿ ಗದ್ದೆಯಲ್ಲಿ ಜರಗಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕ ಜಗತ್ಪಾಲ ಶೆಟ್ಟಿ, ಉಮನೊಟ್ಟು, ಕ್ರೀಡಾಕೂಟ ಚಾಲನೆಯನ್ನು ಹಿರಿಯ ಕಂಬಳ ಓಟಗಾರ ಕುಟ್ಟಿ ಶೆಟ್ಟಿ ಹಕ್ಕೇರಿ ನೆರವೇರಿಸಲಿದ್ದಾರೆ.

ಅಧ್ಯಕ್ಷತೆಯನ್ನು ಪ್ರಗತಿಪರ ಕೃಷಿಕ ಧರ್ಣಪ್ಪ ಶೆಟ್ಟಿ ಪೂವಳ ವಹಿಸಲಿದ್ದಾರೆ.

1ರಿಂದ 10ನೇ ತರಗತಿಯ ಬಾಲಕ ಬಾಲಕಿಯರಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ರೀತಿಯ ಆಟೋಟ ಸ್ಫರ್ಧೆ ಹಾಗೂ ವಿಶೇಷ ಸ್ಪರ್ಧೆ ನಿಧಿ ಹುಡುಕುವುದು ನಡೆಯಲಿದೆ.

Leave a Comment

error: Content is protected !!