25.7 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಯ್ಯೂರು: ಸ.ಪ್ರೌ. ಶಾಲೆಯಲ್ಲಿ ಶಾಲಾ ಪಾರ್ಲಿಮೆಂಟ್ ಉದ್ಘಾಟನೆ


ಕೊಯ್ಯೂರು : ಸರಕಾರಿ ಪ್ರೌಢಶಾಲೆ ಕೊಯ್ಯೂರು ಇಲ್ಲಿ 2023-24ನೇ ಶೈಕ್ಷಣಿಕ ಸಾಲಿನ ಶಾಲಾ ಪಾರ್ಲಿಮೆಂಟ್  ಉದ್ಘಾಟನೆ  ಇತ್ತೀಚೆಗೆ ನಡೆಯಿತು. 

ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆ ಇದರ ಅಧ್ಯಕ್ಷ ಸುಮಂತ್ ಜೈನ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಮಂತ್ರಿಮಂಡಲದ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.ಬಳಿಕ  ನಡೆದ ಅಣಕು ಪಾರ್ಲಿಮೆಂಟ್ ನಲ್ಲಿ ರಾಷ್ಟ್ರಪತಿ ಭಾಷಣ ಮಾಡಿದರು. ನಂತರ ನಡೆದ ಕಲಾಪವನ್ನು ವೀಕ್ಷಿಸಿದರು. ಬಳಿಕ ವಿದ್ಯಾರ್ಥಿಗಳನ್ನು ಕುರಿತು ಭಾಷಣ ಮಾಡುತ್ತಾ  ರಾಜಕೀಯ ಒಂದು ಉದ್ಯೋಗವಾಗಬಾರದು  ಅದೊಂದು ಜವಾಬ್ಧಾರಿಯಾಗಿದೆ. ನಾಯಕ ಯಾವತ್ತೂ ಸ್ಥಾನದಿಂದ ಆಗಬಾರದು ಬದಲಾಗಿ ಆತನ ನಡವಳಿಕೆಯಿಂದ ಆಗಬೇಕು.ಶಿಕ್ಷಣದ ಬೇರು ಕಹಿ ಆದರೂ ಅದರ ಫಲ  ಎಂದಿಗೂ ಸಿಹಿಯಾಗಿರುತ್ತದೆ. ಸಂವಿಧಾನದಲ್ಲಿ ಎಲ್ಲರಿಗೂ ಅವಕಾಸವಿದೆ ಅದನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉನ್ನತ ಸ್ಥಾನ ಪಡೆಯಬೇಕು ಎಂದರು.

ಶಾಲೆಯಲ್ಲಿ ನಡೆದ ವಿದ್ಯಾರ್ಥಿನಾಯಕ ಚುನಾವಣೆಯಲ್ಲಿ ಶಾಲಾನಾಯಕನಾಗಿ ಪೂರ್ಣೇಶ್  ಹತ್ತನೇ ತರಗತಿ  ಆಯ್ಕೆಯಾಗಿರುತ್ತಾರೆ. ಸಭಾಪತಿಯಾಗಿ  ಶಹದಿಯಾ ಹತ್ತನೇ ತರಗತಿ  ಕಲಾಪ ನಡೆಸಿಕೊಟ್ಟರು. ಶಾಲಾ ಮುಖ್ಯೋಪಾಧ್ಯಾಯರಾದ ರಾಧಾಕೃಷ್ಣ ತಚ್ಚಮೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಎಕ್ಸೆಲ್ ಪ.ಪೂ. ಕಾಲೇಜು ಇಲ್ಲಿಯ ಆಡಳಿತಾಧಿಕಾರಿ ಪುರುಷೋತ್ತಮ, ಲೆಕ್ಕಾಧಿಕಾರಿ ಋತೇಶ್, ಪ್ರಾಚೀನ ವಸ್ತು ಸಂಗ್ಹಕಾರ  ಹೈದರಾಲಿ ಹಳ್ಳಿಮನೆ ಉಪಸ್ಥಿತರಿದ್ದರು .

ಶಿಕ್ಷಕರಾದ ಶ್ರೀಮತಿ ಬೇಬಿ ಶ್ರೀಮತಿ ದೀಪ್ತಿ ಹೆಗ್ಡೆ,ಶ್ರೀಮತಿ ಗೀತಾ ಉಡುಪಿ. ಸುಧಾಕರ ಶೆಟ್ಟಿ, ಪ್ರವೀಣ್ ಕುಮಾರ್, ಮೋಹನದಾಸ  ಸಹಕರಿಸಿದರು. ರಾಮಚಂದ್ರ ದೊಡಮನಿ ವಂದಿಸಿದರು.

Related posts

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಪೋಕ್ಸೋ ಕಾಯಿದೆ ಮಾಹಿತಿ ಕಾರ್ಯಕ್ರಮ

Suddi Udaya

ಅರಣ್ಯ ಇಲಾಖೆಯ ನರ್ಸರಿಗೆ ಕಾಡಾನೆಗಳ ದಾಳಿ: ಅಪಾರ ಹಾನಿ

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ: ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

Suddi Udaya

ಉಜಿರೆ: ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘದ ಕ್ಷೇಮ ನಿಧಿಯ 11ನೇ ಸಹಾಯಧನ ಹಸ್ತಾಂತರ

Suddi Udaya

ಲಾಯಿಲ ಮಹಾ ಶಕ್ತಿ ಕೇಂದ್ರದ ಕಡಿರುದ್ಯಾವರ ಗ್ರಾಮದಲ್ಲಿ ಯುವ ಚೌಪಾಲ್

Suddi Udaya

ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ರಸ್ತೆ ಬದಿ ಹಣ್ಣಿನ ಗಿಡ ನಾಟಿ, ನೆಟ್ಟ ಗಿಡಗಳ ಪುನಶ್ಚೇತನ ಮತ್ತು ಇಂಗು ಗುಂಡಿ ರಚನಾ ಕಾರ್ಯಕ್ರಮ

Suddi Udaya
error: Content is protected !!