July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಯ್ಯೂರು: ಸ.ಪ್ರೌ. ಶಾಲೆಯಲ್ಲಿ ಶಾಲಾ ಪಾರ್ಲಿಮೆಂಟ್ ಉದ್ಘಾಟನೆ


ಕೊಯ್ಯೂರು : ಸರಕಾರಿ ಪ್ರೌಢಶಾಲೆ ಕೊಯ್ಯೂರು ಇಲ್ಲಿ 2023-24ನೇ ಶೈಕ್ಷಣಿಕ ಸಾಲಿನ ಶಾಲಾ ಪಾರ್ಲಿಮೆಂಟ್  ಉದ್ಘಾಟನೆ  ಇತ್ತೀಚೆಗೆ ನಡೆಯಿತು. 

ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆ ಇದರ ಅಧ್ಯಕ್ಷ ಸುಮಂತ್ ಜೈನ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಮಂತ್ರಿಮಂಡಲದ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.ಬಳಿಕ  ನಡೆದ ಅಣಕು ಪಾರ್ಲಿಮೆಂಟ್ ನಲ್ಲಿ ರಾಷ್ಟ್ರಪತಿ ಭಾಷಣ ಮಾಡಿದರು. ನಂತರ ನಡೆದ ಕಲಾಪವನ್ನು ವೀಕ್ಷಿಸಿದರು. ಬಳಿಕ ವಿದ್ಯಾರ್ಥಿಗಳನ್ನು ಕುರಿತು ಭಾಷಣ ಮಾಡುತ್ತಾ  ರಾಜಕೀಯ ಒಂದು ಉದ್ಯೋಗವಾಗಬಾರದು  ಅದೊಂದು ಜವಾಬ್ಧಾರಿಯಾಗಿದೆ. ನಾಯಕ ಯಾವತ್ತೂ ಸ್ಥಾನದಿಂದ ಆಗಬಾರದು ಬದಲಾಗಿ ಆತನ ನಡವಳಿಕೆಯಿಂದ ಆಗಬೇಕು.ಶಿಕ್ಷಣದ ಬೇರು ಕಹಿ ಆದರೂ ಅದರ ಫಲ  ಎಂದಿಗೂ ಸಿಹಿಯಾಗಿರುತ್ತದೆ. ಸಂವಿಧಾನದಲ್ಲಿ ಎಲ್ಲರಿಗೂ ಅವಕಾಸವಿದೆ ಅದನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉನ್ನತ ಸ್ಥಾನ ಪಡೆಯಬೇಕು ಎಂದರು.

ಶಾಲೆಯಲ್ಲಿ ನಡೆದ ವಿದ್ಯಾರ್ಥಿನಾಯಕ ಚುನಾವಣೆಯಲ್ಲಿ ಶಾಲಾನಾಯಕನಾಗಿ ಪೂರ್ಣೇಶ್  ಹತ್ತನೇ ತರಗತಿ  ಆಯ್ಕೆಯಾಗಿರುತ್ತಾರೆ. ಸಭಾಪತಿಯಾಗಿ  ಶಹದಿಯಾ ಹತ್ತನೇ ತರಗತಿ  ಕಲಾಪ ನಡೆಸಿಕೊಟ್ಟರು. ಶಾಲಾ ಮುಖ್ಯೋಪಾಧ್ಯಾಯರಾದ ರಾಧಾಕೃಷ್ಣ ತಚ್ಚಮೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಎಕ್ಸೆಲ್ ಪ.ಪೂ. ಕಾಲೇಜು ಇಲ್ಲಿಯ ಆಡಳಿತಾಧಿಕಾರಿ ಪುರುಷೋತ್ತಮ, ಲೆಕ್ಕಾಧಿಕಾರಿ ಋತೇಶ್, ಪ್ರಾಚೀನ ವಸ್ತು ಸಂಗ್ಹಕಾರ  ಹೈದರಾಲಿ ಹಳ್ಳಿಮನೆ ಉಪಸ್ಥಿತರಿದ್ದರು .

ಶಿಕ್ಷಕರಾದ ಶ್ರೀಮತಿ ಬೇಬಿ ಶ್ರೀಮತಿ ದೀಪ್ತಿ ಹೆಗ್ಡೆ,ಶ್ರೀಮತಿ ಗೀತಾ ಉಡುಪಿ. ಸುಧಾಕರ ಶೆಟ್ಟಿ, ಪ್ರವೀಣ್ ಕುಮಾರ್, ಮೋಹನದಾಸ  ಸಹಕರಿಸಿದರು. ರಾಮಚಂದ್ರ ದೊಡಮನಿ ವಂದಿಸಿದರು.

Related posts

ಬೆಂಗಳೂರಿನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ತೋಟತ್ತಾಡಿ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

Suddi Udaya

ಕಣ್ತಪ್ಪಿನಿಂದ ಇನ್ನೊಬ್ಬರ ಖಾತೆಗೆ ಹಣ ವರ್ಗಾವಣೆ: ಮರುಪಾವತಿಸಲು ನಿರಾಕರಣೆ ; ದೂರು ದಾಖಲು

Suddi Udaya

ಸಹಾಯ ಹಸ್ತ –ಸೇವಾಧಾಮದಿಂದ ಪುನಶ್ಚೇತನಗೊಂಡ ದಿವ್ಯಾಂಗರಿಂದ ತಯಾರಿಸಲಾದ ಉತ್ಪನ್ನಗಳ ಮಾರಾಟ ಯೋಜನೆ

Suddi Udaya

ಪಾಂಡವರಕಲ್ಲು : ಕಜೆಕಾರು ಶ್ರೀ ಮಹಾದೇವದೇವೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

Suddi Udaya

ಜನಸ್ಪಂದನ ಸಭೆಯ ಫಲಶ್ರುತಿ 108 ಹಕ್ಕು ಪತ್ರ, 54 ಮಂದಿಗೆ ನಡಾವಳಿ ವಿತರಣೆ

Suddi Udaya

ಹೆದ್ದಾರಿ ಅವಾಂತರ ಕೈಗಾರಿಕಾ ವಸಾಹತಿನ ಉದ್ಯಮಿಗಳ ಪ್ರತಿಭಟನೆ: ತಾ.ಪಂಕಾರ್ಯನಿರ್ವಹಣಾಧಿಕಾರಿ ಭೇಟಿ

Suddi Udaya
error: Content is protected !!