July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಸ್.ಡಿ.ಎಮ್.ಪದವಿ ಪೂರ್ವ ಕಾಲೇಜು: ಸ್ಕಾರ್ಫ್ ಡೇ ಆಚರಣೆ

ಉಜಿರೆ: ಸ್ಕೌಟ್ಸ್ ಗೈಡ್ಸ್ ಸಂಸ್ಥೆಯು ಹುಟ್ಟಿನಿಂದ ಸಾಯುವವರೆಗೂ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಸಂಸ್ಥೆಯಾಗಿದ್ದು,ಇದು ಜಗತ್ತಿನಾದ್ಯಂತ ಯಾವುದೇ ಜಾತಿ-ವಯೋ ಭೇದವಿಲ್ಲದೇ ತನ್ನ ಸೇವಾ ಕಾರ್ಯವನ್ನು ನಡೆಸುತ್ತಿದೆ ಎಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹಾಗೂ ಪ್ರೀ ಎ ಎಲ್ ಟಿ ಶ್ರೀಮತಿ ಸೇವಂತಿ ಬಿ ನುಡಿದರು.

ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸ್ಕಾರ್ಫ್ ಡೇ ಯ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ್ದರು.ಸ್ಕೌಟ್ ಗೈಡ್ ಜೀವನದಲ್ಲಿ ಜವಾಬ್ಧಾರಿಯನ್ನು, ಶಿಸ್ತನ್ನು, ನಾಯಕತ್ವ ಕೌಶಲ್ಯವನ್ನು ಹಾಗೂ ಸಾಮಾಜಿಕ ಮುಂದಾಳತ್ವವನ್ನು ವಹಿಸಲು ಸ್ವಯಂ ಪ್ರೇರಣೆ ನೀಡುತ್ತದೆ.ಎಲ್ಲಾ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಯಾವತ್ತೂ ತನ್ನ ಬಗ್ಗೆ ಯೋಚಿಸದೇ ಸಮಾಜದ ಬಗ್ಗೆ ,ಸ್ವಾರ್ಥ ಬಿಟ್ಟು ಪರರ ಬಗ್ಗೆ ,ಪರೋಪಕಾರದ ಬಗ್ಗೆ ಸದಾ ಹಂಬಲಿಸುವ ಮನೋಭಾವವುಳ್ಳವರು ಹಾಗೂ ಇಂತಹ ಭಾವನೆಯನ್ನು ಸದಾ ಜಾಗೃತಗೊಳಿಸಿಕೊಂಡಿರುತ್ತಾರೆ ಹಾಗೂ ಸದಾ ಸೇವೆಗೆ ಕಂಕಣಬದ್ಧರಾಗಿರುತ್ತರೆ ಇದು ಸ್ಕೌಟ್ ಗೈಡ್ ಕಲಿಸುವ ಪಾಠ ಎಂದು ಎಲ್ಲರಿಗೂ ಶುಭ ಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರಮೋದ್ ಕುಮಾರ್ ಮಾತನಾಡಿ ಸ್ಕೌಟ್ ಗೈಡ್ ವಿದ್ಯರ್ಥಿಗಳಿಗೆ ಯಾವುದೇ ಆದೇಶದ ಅವಶ್ಯಕತೆ ಇಲ್ಲ ಯಾಕೆಂದರೆ ಅವರು ಯಾವತ್ತೂ ಯಾವುದಾದರೊಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮನ್ನು ತಾವೂ ಸದಾ ಕ್ರೀಯಾಶೀಲರಾಗಿ ಇಟ್ಟುಕೊಂಡಿರುತ್ತಾರೆ,ಇವರ ನಿಸ್ವಾರ್ಥ ಸೇವೆ ಸದಾ ಸ್ತುತ್ಯಾರ್ಹವಾಗಿದ್ದು ಇದೇ ರೀತಿ ಇನ್ನೂ ಹೆಚ್ಚಿನ ಸಾಮಾಜಿಕ ಕಳಕಳಿಯನ್ನು ಬೆಳಸಿಕೊಳ್ಳಬೇಕು ಎಂದು ನುಡಿದು ಶುಭ ಹಾರೈಸಿದರು.


ವೇದಿಕೆಯ ಮೇಲೇ ಕಾಲೇಜಿನ ರೋವರ್ ಸ್ಕೌಟ್ ಲೀಡರ್ ಹಾಗೂ ರೇಂಜರ್ ಲೀಡರ್ಗಳಾದ ಲಕ್ಷ್ಮೀಶ್ ಭಟ್ ಹಾಗೂ ಶ್ರೀಮತಿ ಅಂಕಿತಾ ಎಮ್ ಕೆ ಉಪಸ್ಥಿತರಿದ್ದರು.ರೇಂಜರ್ ವಿದ್ಯಾರ್ಥಿನಿ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿ ರೋವರ್ ವಿದ್ಯಾರ್ಥಿ ಹಿತೇಶ್ ಬಿ ಪಿ ಸ್ವಾಗತಿಸಿದರು, ರೋವರ್ ವಿದ್ಯಾರ್ಥಿ ಆದಿತ್ಯ ಹೆಗಡೆ ಸ್ಕಾರ್ಫ್ ದಿನ ಆಚರಣೆಯ ಮಹತ್ವವನ್ನು ನೀಡಿದರು. ರೇಂಜರ್ ವಿದ್ಯಾರ್ಥಿನಿ ರಚನ್ವಿ ವಂದಿಸಿದರು.

Related posts

ಧರ್ಮಸ್ಥಳ: ನೇರ್ತನೆ ನಿವಾಸಿ ಉದ್ಯಮಿ ಆ್ಯಂಟನಿ ಎ.ಜೆ ನಿಧನ

Suddi Udaya

ಒಂದು ವಾರದ ಒಳಗೆ ಬೆಳೆ ವಿಮೆ ರೈತರ ಖಾತೆಗೆ ಜಮೆ ಮಾಡದೇ ಇದ್ದಲ್ಲಿ ಕಾನೂನು ಹೋರಾಟ : ರಕ್ಷಿತ್ ಪಣೆಕ್ಕರ

Suddi Udaya

ಕುತ್ಲೂರು ಸ.ಉ.ಪ್ರಾ. ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿಗೆ ಗೌರವ

Suddi Udaya

ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ, ಪುಷ್ಪರಥೋತ್ಸವ: ಅಭಿನಂದನೆ ಕಾರ್ಯಕ್ರಮ

Suddi Udaya

ತಾಲೂಕು ಮಟ್ಟದ ಕ್ರೀಡಾ ಕೂಟ: ಮಚ್ಚಿನ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

Suddi Udaya

ಉಜಿರೆ : ಶಾಲಾ ವಿದ್ಯಾರ್ಥಿ ಪರಿಷತ್ತಿನ ನಾಯಕತ್ವದ ಆಯ್ಕೆಗಾಗಿ ಚುನಾವಣೆ

Suddi Udaya
error: Content is protected !!