ಕು. ಸೌಜನ್ಯಳ ಕೊಲೆ ಪ್ರಕರಣ: ಆರೋಪಿಗಳ ಪತ್ತೆಗಾಗಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

Suddi Udaya

Updated on:

ಮಿತ್ತಬಾಗಿಲು: ಕು. ಸೌಜನ್ಯ ಸಾವಿನ ಪ್ರಕರಣಕ್ಕೆ 11 ವರ್ಷವಾದರೂ ಸೌಜನ್ಯ ಕುಟುಂಬಸ್ಥರಿಗೆ ನ್ಯಾಯ ಇನ್ನೂ ಸಿಗಲಿಲ್ಲ ಅಮಾನುಷ ಕೊಲೆ, ಅತ್ಯಾಚಾರವೆಸಗಿದ ನಿಜವಾದ ಆರೋಪಿಗಳು ಪತ್ತೆಯಾಗಿಲ್ಲ. ಕು. ಸೌಜನ್ಯಳ ಕುಟುಂಬಸ್ಥರಿಗೆ ನ್ಯಾಯ ಸಿಗಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ವಿಶ್ವ ಹಿಂದೂ ಪರಿಷತ್ ವತಿಯಿಂದ ಆ.7ರಂದು ಪ್ರಧಾನ ಕಾರ್ಯದರ್ಶಿ ನವೀನ್ ನೆರಿಯ ಇವರ ನೇತೃತ್ವದಲ್ಲಿ ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ಅರ್ಚಕರ ಮೂಲಕ ಶ್ರೀ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಾದೆ ಕಮಲಾಕ್ಷ ಪೂಜಾರಿ, ಕಾರ್ಯದರ್ಶಿ ಪ್ರಮೀಳಾ, ರಾಜೇಶ್ ಮೂರ್ಜೆ, ಸಮಿತಿ ಸದಸ್ಯ ಮೋಹನ್ ಬಾರೆ ಉಪಸ್ಥಿತರಿದ್ದರು.
ಅಶೋಕ್ ಕುಮಾರ್ ಜೈನ್, ಈಶ್ವರ್ ಗೌಡ, ದಿನೇಶ್ ದೇವಸ್ಯ, ಓಬಯ್ಯ ಗೌಡ, ಪ್ರಸಾದ್ ಕೆ.ವಿ. , ರೋಹಿತ್ ಕಜೆ, ಜಯಚಂದ್ರ ಬಾರಂತ್ಯಾರು, ಅಖಿಲ್ ಕಜೆ, ನಾರಾಯಣ ಶೆಟ್ಟಿ, ಲೋಕೇಶ್ ಶೆಟ್ಟಿ ಹಾಗೂ ಊರಿನ ಭಕ್ತರು ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.

Leave a Comment

error: Content is protected !!