September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ನಲ್ಲಿ ಸಂಭ್ರಮದ ಮೊಂತಿ (ತೆನೆ ) ಹಬ್ಬ

ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ನಲ್ಲಿ ಇಂದು ಕನ್ಯಾ ಮರಿಯಮ್ಮರವರ ಹುಟ್ಟು ಹಬ್ಬವಾದ ಮೊಂತಿ ಹಬ್ಬ ( ತೆನೆ ಹಬ್ಬ) ವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.


ಬೆಳ್ತಂಗಡಿ ಚರ್ಚ್ ಬಸ್ ಸ್ಟಾಂಡ್ ಸರ್ವಿಸ್ ರೋಡ್ ನಲ್ಲಿ ಹಿಮಾಲಯ ಚಿಕನ್ ಫಾರ್ಮ್ ಬಳಿ ಹಾಕಲಾದ ಭವ್ಯ ಮಂಟಪದಲ್ಲಿ ಕನ್ಯಾ ಮರಿಯಮ್ಮರವರ ಪ್ರಾರ್ಥನೆ ಹಾಗೂ ತೆನೆಯ ಆಶೀರ್ವಚನ ನಡೆಯಿತು.


ಚರ್ಚಿನ ಪ್ರದಾನ ಧರ್ಮ ಗುರುಗಳಾದ ಅತಿ ವಂದನೀಯ ಫಾ. ವಾಲ್ಟರ್ ಡಿಮೆಲ್ಲೋ, ವಂದನೀಯ ಫಾ. ಕ್ಲಿಫರ್ಡ್ ಪಿಂಟೊ, ಅತಿಥಿ ಗುರುಗಳಾದ ವo. ಫಾ. ಕಿರಣ್ ಲೋಬೊ ಹಾಗು ವo. ಫಾ. ಆಲ್ವಿನ್ ಮಾಡ್ತಾರವರು ಹಾಜರಿದ್ದರು. ಫಾ. ಕ್ಲಿಫರ್ಡ್ ಪಿಂಟೊರವರು ಮೊಂತಿ ಹಬ್ಬದ ದಿನದ ಮಹತ್ವವನ್ನು ತಿಳಿಸಿದರು.


ಫಾ. ಕಿರಣ್ ಲೋಬೊರವರು ಹೊಸ ಭತ್ತದ ತೆನೆಯನ್ನು ಆಶೀರ್ವದಿಸಿ ಪ್ರಧಾನ ಗುರುಗಳಾದ ಫಾ. ವಾಲ್ಟರ್ ಡಿ’ಮೆಲ್ಲೊ ಪ್ರಾರ್ಥನೆ ನಡೆಸಿಕೊಟ್ಟರು.
ನಂತರ ಭವ್ಯ ಮೆರವಣಿಗೆ ಚರ್ಚ್ ತನಕ ನಡೆಯಿತು. ಚರ್ಚ್ ನಲ್ಲಿ ಸಂಭ್ರಮದ ದಿವ್ಯ ಬಲಿ ಪೂಜೆ, ಹೊಸ ತೆನೆ ಚರ್ಚಿನ ಪ್ರತಿ ಕುಟುಂಬಕ್ಕೆ ವಾಳೆಯ ಗುರಿಕಾರರು ವಿತರಿಸಿದರು. ಕನ್ಯಾ ಮರಿಯಮ್ಮರಿಗೆ ಹೂಗಳನ್ನು ತಂದು ಅರ್ಪಿಸಿದ ಮಕ್ಕಳಿಗೆ ಕಬ್ಬು ಹಾಗೂ ಬಂದಂತಹ ಎಲ್ಲರಿಗೆ ಸಿಹಿಯನ್ನು ವಿತರಿಸಲಾಯಿತು.
ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೊ, ಪಾಲನ ಮಂಡಳಿಯ ಸದಸ್ಯರು ಹಾಗೂ 18 ವಾಳೆಯ ಗುರಿಕಾರರು ಸಹಕರಿಸಿದರು.

Related posts

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ಶೈಕ್ಷಣಿಕ ಸಮ್ಮೇಳನ

Suddi Udaya

ಬೆಳ್ತಂಗಡಿ: ಮುಳಿಯ ಜ್ಯುವೆಲ್ಸ್ ಮತ್ತು ಸುದ್ದಿ ಉದಯ ವಾರಪತ್ರಿಕೆಯಿಂದ “ಸ್ವಾತಂತ್ರೋತ್ಸವ” ಆಚರಣೆ

Suddi Udaya

ಉಜಿರೆ: ಬ್ರಹ್ಮಶ್ರೀ ನಾರಾಯಣ ಗುರುಗಳ ಪೀಠ ಪ್ರತಿಷ್ಠೆ, ಕಲಶಾಭಿಷೇಕ, ಶ್ರೀ ನಾರಾಯಣ ಗುರುಮಂದಿರ ಲೋಕಾರ್ಪಣೆ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಬೆಂಗಳೂರು ಬಿಲ್ಲವ ಅಸೋಸಿಯೇಷನ್ ಪೂಜಾ ಸಮಿತಿಯ ಅಧ್ಯಕ್ಷ ಸಂತೋಷ್ ಬಂಗೇರರವರ ತಂಡದ ಸದಸ್ಯರಿಂದ ನವರಾತ್ರಿಯ ವಿಶೇಷ ಭಜನೆ

Suddi Udaya

ಗಾಯತ್ರಿ ಮಂತ್ರವೇ ಸರ್ವಶ್ರೇಷ್ಠ

Suddi Udaya

ಕೊಯ್ಯೂರು: ಜೀಪು ಮತ್ತು ಸರಕಾರಿ ಬಸ್ ನಡುವೆ ಅಪಘಾತ

Suddi Udaya
error: Content is protected !!