ಕೊಂಬಿನಡ್ಕ ಶಾಲೆಯಿಂದ ವರ್ಗಾವಣೆಗೊಂಡ ಮುಖ್ಯಶಿಕ್ಷಕಿಗೆ ಬೀಳ್ಕೊಡುಗೆ

Suddi Udaya

ಮುಂಡಾಜೆ: 2016 ರಿಂದ 2023 ರವರೆಗೆ ಮುಂಡಾಜೆ ಕೊಂಬಿನಡ್ಕ ಕಿ. ಪ್ರಾ. ಶಾಲೆಯಲ್ಲಿ ಮುಖ್ಯಶಿಕ್ಷಕಿಯಾಗಿ ಕರ್ತವ್ಯ ಸಲ್ಲಿಸಿ ವರ್ಗಾವಣೆಗೊಂಡ ಬೇಬಿಂದ್ರ ಅವರಿಗೆ ಬೀಳ್ಕೊಡುಗೆ ಸಮಾರಂಭ ಆ. 5 ರಂದು ಶಾಲೆಯಲ್ಲಿ ಜರುಗಿತು.


ಸಭೆಯ ಅಧ್ಯಕ್ಷತೆಯನ್ನು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶಶಿಧರ ಠೋಸರ್ ವಹಿಸಿದ್ದರು.


ಹಿರಿಯರಾದ ಶ್ರೀನಿವಾಸ ಕಾಕತ್ಕರ್, ಶಿಕ್ಷಣ ಇಲಾಖೆಯ ಸಿಆರ್‌ಪಿ ಪ್ರಶಾಂತ್ ಪೂಜಾರಿ, ಶಿಕ್ಷಣ ಪ್ರೇಮಿ ಅರೆಕ್ಕಲ್ ರಾಮಚಂದ್ರ ಭಟ್, ಗ್ರಾ.ಪಂ ಸದಸ್ಯರಾದ ಗಣೇಶ್ ಬಂಗೇರ ಮತ್ತು ಜಗದೀಶ್ ನಾಯ್ಕ ಉಪಸ್ಥಿತರಿದ್ದರು.
ಅಶ್ವಿನಿ ಅವರು ಸ್ವಾಗತಿಸಿ, ರೋಹಿಣಿ ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!