23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಮುಂಡಾಜೆಯಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ, ಆಟಿ ತಿನಿಸಿನ ಸಹಭೋಜನ, ಆಟಿಕಳೆಂಜ ಪ್ರದರ್ಶನ

ಮುಂಡಾಜೆ: ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆ ಹಾಗೂ ವಿಮುಕ್ತಿ ಸಂಸ್ಥೆ ಲಾಯಿಲ ಇವರ ಜಂಟಿ ಸಹಯೋಗದೊಂದಿಗೆ ಮುಂಡಾಜೆ ಗ್ರಾ.ಪಂ ಸಭಾಂಗಣದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಆ. 6 ರಂದು ನಡೆಯಿತು.


ಮುಂಡಾಜೆಯ ಹಿರಿಯ ತುಳು ಜಾನಪದ ಕಲಾವಿದೆ ಅಪ್ಪಿ ಅರಸಮಜಲು ಅವರು ಪಾಡ್ದಾನ ಹಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.


ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ದೇವಿ ಪ್ರಸಾದ್ ಮಾತನಾಡಿ, ತುಳುನಾಡಿನಲ್ಲಿ ದೇವರಿಗಿಂತ ಜಾಸ್ತಿ ದೈವಗಳ ಬಗ್ಗೆ ನಂಬಿಕೆ ಭಕ್ತಿ ಶ್ರದ್ಧೆ ಕಂಡುಬರುತ್ತದೆ. ಅಂತೆಯೇ ಆಟಿಕಳೆಂಜದಂತಹ ಧಾರ್ಮಿಕ ನಂಬಿಕೆಗಳು ಆಟಿ ತಿಂಗಳ ಜೊತೆ ಬೆಸೆದುಕೊಂಡಿದೆ. ತುಳುನಾಡಿನ ಆಹಾರ ಪದ್ದತಿ ತಿಂಗಳ ಮಹತ್ವಕ್ಕೆ ಪೂರಕವಾಗಿದೆ ಎಂದರು. ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಚಟುವಟಿಕೆ ಅನೇಕ ಪ್ರತಿಭೆಗಳ ಹುಟ್ಟಿಗೆ ವೇದಿಕೆಯಾಗಿದೆ. ಮುಂಡಾಜೆಯ ಮಣ್ಣಿನಲ್ಲೇ ಕಲೆ ಸಂಸ್ಕೃತಿ ಅಡಗಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷೆ ರಂಜಿನಿ ಮಾತನಾಡಿ, ಆಟಿಯ ಆಚರಣೆ ಈಗ ಫ್ಯಾಶನ್ ಆಗಿದೆ. ಅದರೆ ಹಿಂದೆ ಹಿರಿಯರು ಬದುಕುವ ರೀತಿಯೇ ಆಗಿತ್ತು. ಸಂಘ ಸಂಸ್ಥೆಗಳ ಮೂಲಕ ರೀತಿ ಸಾಮಾಜಿಕ ಆಚರಣೆ ಹಮ್ಮಿಕೊಳ್ಳುವುದರಿಂದ ತುಳು ಸಂಸ್ಕೃತಿ ಉಳಿಸಲು ಪ್ರೇರಣೆಯಾಗುತ್ತದೆ‌. ನಮ್ಮ ಮಕ್ಕಳಿಗೂ ಈ ಸಂಸ್ಕೃತಿ ದಾಟಿಸಬೇಕಿದೆ ಎಂದರು.


ವೇದಿಕೆಯಲ್ಲಿ ಯಂಗ್ ಚಾಲೆಂಜರ್ಸ್ ಅಧ್ಯಕ್ಷ ಶೀನಪ್ಪ ಗೌಡ ಉಪಸ್ಥಿತರಿದ್ದರು. ಕಾರ್ಯದರ್ಶಿ ಶಶಿಧರ ಠೋಸರ್, ಪದಾಧಿಕಾರಿಗಳಾದ ಪುಷ್ಪರಾಜ್, ವಿಜಯಕುಮಾರ್, ಕೃಷ್ಣಪ್ಪ, ಸುರೇಶ್, ಕಸ್ತೂರಿ, ಶೀನ ಕಲ್ಮಂಜ, ಗ್ರಾ.ಪಂ ಸದಸ್ಯ ಜಗದೀಶ‌ ನಾಯ್ಕ, ಸಂಘದ ಗೌರವ ಸಲಹೆಗಾರ ಅರೆಕ್ಕಲ್ ರಾಮಚಂದ್ರ ಭಟ್, ರಾಘವ ಶೆಟ್ಟಿ ನೆಯ್ಯಾಲು, ಮಹಿಳಾ ವಿಭಾಗದ ಸಂಯೋಜಕಿ ವಸಂತಿ ಸಹಕರಿಸಿದರು.

ಆಟಿಕಳೆಂಜ ಪ್ರದರ್ಶನ; ಸಹಭೋಜನ
ದಿನದ ಮಹತ್ವ ಸಾರುವ ಬಗ್ಗೆ ವಿಜಯ ಕುಮಾರ್ ಮತ್ತು ವರುಣ್ ಬಳಗದಿಂದ ಆಟಿ ಕಳೆಂಜ ಪ್ರದರ್ಶನ ಉತ್ತಮವಾಗಿ ಮೂಡಿಬಂತು. ಬಳಿಕ ತುಳುನಾಡ ಶೈಲಿಯ ಆಹಾರದ ಸಹಭೋಜನ ಏರ್ಪಡಿಸಲಾಗಿತ್ತು. ಚಲನಚಿತ್ರ ಕಲಾವಿದೆಯೂ ಆಗಿರುವ ಹಿರಿಯ ಪಾಡ್ದಾನಾ ಸಾಹಿತಿ ಅಪ್ಪಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಮುಂಡಾಜೆ ಗ್ರಾ.ಪಂ ಗ್ರಂಥಾಲಯಕ್ಕೆ ಅಮೂಲ್ಯವಾದ 45 ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಗಿ ಗ್ರಂಥ ಪಾಲಕಿ ಮಮತಾ ಸ್ವೀಕರಿಸಿದರು.


ಸಂಚಾಲಕ ಲ. ನಾಮರಾವ್ ಪ್ರಸ್ತಾವನೆಗೈದರು. ಪುಟಾಣಿ ಇಷ್ಟ ಪ್ರಾರ್ಥನೆ ಹಾಡಿದರು. ಜತೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ನಿಕಟಪೂರ್ವ ಅಧ್ಯಕ್ಷ ಲ. ಅಶ್ರಫ್ ಆಲಿಕುಂಞಿ ಸನ್ಮಾನಿತರ ಪರಿಚಯ ಮಾಡಿದರು.
ಚಂದ್ರಾವತಿ ಉಮೇಶ್ ಸ್ವಾಗತಿಸಿದರು. ಬಿ.ಕೆ ಶಶಿ ವಂದಿಸಿದರು.

Related posts

ಕಳೆಂಜ ಶ್ರೀ ಸದಾಶಿವ ದೇವಸ್ಥಾನದ ಶ್ರೀ ಶಾಸ್ತರ ದೇವರ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಎಸ್ ಡಿ ಎಂ ಪ.ಪೂ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿ ಸಂಸ್ಕೃತದಲ್ಲಿ ಪೂರ್ಣಾಂಕ

Suddi Udaya

ಕಟ್ಟದಬೈಲು ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿಯ ನೂತನ ಅಧ್ಯಕ್ಷರಾಗಿ ರತ್ನಾಕರ ಆಚಾರ್ಯ ಉಪಾಧ್ಯಕ್ಷರಾಗಿ ದೀಪಾ ಎಸ್ ಮೇಚೆರಿ ಆಯ್ಕೆ

Suddi Udaya

ಬೆಳ್ತಂಗಡಿ ವಕೀಲರ ಸಂಘದಿಂದ ದೀಪಾವಳಿ ಹಬ್ಬದ ಸಂಭ್ರಮಾಚಾರಣೆ ಆಚರಣೆ

Suddi Udaya

ರಾಜ್ಯೋತ್ಸವ ಪ್ರಶಸ್ತಿಗೆ ಸಹಕರಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರಿಗೆ ದಯಾ ವಿಶೇಷ ಶಾಲೆಯ ವತಿಯಿಂದ ಗೌರವಾರ್ಪಣೆ

Suddi Udaya

ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹುಟ್ಟುಹಬ್ಬ: ನಾಗೇಶ್ ಕುಮಾರ್ ಅಭಿಮಾನಿ ಬಳಗದ ವತಿಯಿಂದ ಕೊಕ್ಕಡ ಎಂಡೋ ಸಲ್ಫಾನ್ ಪಾಲನಾ ಕೇಂದ್ರ ಹಾಗೂ ಕೊಕ್ಕಡ ಅಂಗನವಾಡಿ ಕೇಂದ್ರದಲ್ಲಿ ಆಚರಣೆ

Suddi Udaya
error: Content is protected !!