July 23, 2026
ಅಪರಾಧ ಸುದ್ದಿ

ಸೋಮಂತ್ತಡ್ಕ:ಅಂಗಡಿಯ ಶಟರ್ ತೆರೆದು ಅಂಗಡಿಯ ಒಳಗೆ ಡ್ರವರ್ ನಲ್ಲಿ ಇದ್ದ ರೂ.50 ಸಾವಿರ ನಗದು ಕಳವು

ಬೆಳ್ತಂಗಡಿ: ಮುಂಡಾಜೆ ಗ್ರಾಮದ ನಿವಾಸಿ ಪದ್ಮೇಶ್ ಕೆ ಎಸ್ ಎಂಬವರ ಸೋಮಂತ್ತಡ್ಕದ ಅಂಗಡಿಯ ಶಟರ್ ತೆಗೆದು ಅಂಗಡಿಯ ಒಳಗೆ ಡ್ರವರ್ ನಲ್ಲಿ ಇದ್ದ ರೂ.50 ಸಾವಿರ ನಗದನ್ನು ಕಳ್ಳರು ಕಳವು ಗೈದಿರುವುದಾಗಿ ಆ.10ರಂದು ಧಮ೯ಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ.
ಪದ್ಮೇಶ್ ಅವರು ಮುಂಡಾಜೆ ಗ್ರಾಮದ ಸೊಮಂತ್ತಡ್ಕ ಎಂಬಲ್ಲಿ ದಿನಸಿ ಅಂಗಡಿಯನ್ನು ನಡೆಸಿಕೊಂಡಿದ್ದು, ಆ.9 ರಂದು ತನ್ನ ವ್ಯವಹಾರದ ಬಾಬ್ತು 50 ಸಾವಿರ ರೂ ಹಣವನ್ನು ತನ್ನ ಅಂಗಡಿಯ ಡ್ರಾವರನ್ನಲ್ಲಿಟ್ಟು ಬೀಗ ಹಾಕಿ ರಾತ್ರಿ 10 ಗಂಟೆ ಸಮಯಕ್ಕೆ ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿದ್ದು, ಮರುದಿನ ಆ.10 ರಂದು ಎಂದಿನಂತೆ ಬೆಳಗ್ಗೆ 6.30ಕ್ಕೆ ಅಂಗಡಿ ಬಾಗಿಲು ತೆರೆಯಲು ಬಂದಾಗ ಅಂಗಡಿಯ ಅರ್ಧ ಶೆಟರ್ ತೆರೆದಿರುವುದನ್ನು ಕಡು ಅಂಗಡಿಯನ್ನು ಪರಿಶೀಲಿಸಿದಾಗ ಡ್ರಾವರ್ ಬೀಗವನ್ನು ಕಳ್ಳರು ಯಾವುದೋ ಆಯುಧದಿಂದ ಮೀಟಿ ಅದರಲ್ಲಿದ್ದ ನಗದು ರೂ 50ಸಾವಿರವನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 55/2023 ಕಲಂ: 457,380 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.

Related posts

ಕ್ಯಾಂಟಿನ್ ಒಳಗಡೆ ವೇಶ್ಯಾವಟಿಕೆ ದಂಧೆ ಬಯಲು ; ಬೆಳ್ತಂಗಡಿ ಪೊಲೀಸರಿಂದ ದಾಳಿ: ಪ್ರಕರಣ ದಾಖಲು

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತು ಹಾಕಿರುವ ದೂರು ನೀಡಿದ್ದ ಪ್ರಕರಣ ಸಾಕ್ಷಿ ದೂರುದಾರರ ಗುರುತನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ ಹಿನ್ನೆಲೆ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರಿಂದ ಇನ್ನೊಂದು ವಿಚಾರಣೆ ಪ್ರಾರಂಭ

Suddi Udaya

ಶಿವಮೊಗ್ಗ ಜೈಲಿನಿಂದ ಚಿನ್ನಯ್ಯ ಬಿಡುಗಡೆ

Suddi Udaya

ಕೋಳಿ ತ್ಯಾಜ್ಯದಿಂದ ಅಶುದ್ಧಿಯಾಗುತ್ತಿರುವ ಶಿಶಿಲದ‌ ” ಕಪಿಲೆ”

Suddi Udaya

ಆಕಸ್ಮಿಕವಾಗಿ ನದಿಗೆ ಬಿದ್ದು ಬಾಲಕ ಸಾವು

Suddi Udaya

ಬಂದಾರು: ಬಾಲಕಿಗೆ ಲೈಂಗಿಕ ಕಿರುಕುಳ, ಆರೋಪಿ ರಿಕ್ಷಾ ಚಾಲಕ ಸಹಿತ ಇಬ್ಬರ ಬಂಧನ

Suddi Udaya
error: Content is protected !!