22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಸಾಧಕರು

ಕಳೆಂಜ ಗ್ರಾಮ ಪಂಚಾಯತ್ ವತಿಯಿಂದ ನಿವೃತ್ತ ಸೈನಿಕ ಕೆ. ಮಹಾಬಲ ಕಾಂತ್ರೇಲು ಮತ್ತು ಹಿರಿಯ ಪಶು ವೈದ್ಯ ಯಾದವ ಗೌಡ ರವರಿಗೆ ಸನ್ಮಾನ

ಕಳೆಂಜ: ಸುದೀರ್ಘ 39 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಹಾಬಲ ಕಾಂತ್ರೇಲು ಮತ್ತು 31 ವರ್ಷಗಳ ಕಾಲ ಹಿರಿಯ ಪಶು ವೈದ್ಯ ಪರೀಕ್ಷಕರಾಗಿ ಸೇವೆ ಸಲ್ಲಿಸಿದ್ದ ಯಾದವ ಗೌಡರವರನ್ನು ಕಳೆಂಜ ಗ್ರಾ.ಪಂ. ವತಿಯಿಂದ ಆ.10ರಂದು ಗೌರವಿಸಲಾಯಿತು.

ಮಹಾಬಲ ಕಾಂತ್ರೇಲು ಅವರು 1983ರಂದು ಸೇವೆಗೆ ಸೇರಿದ್ದು, ಸಿಪಾಯಿ, ಲ್ಯಾನ್ಟ್ ನಾಯಕ್, ನಾಯಕ್ , ಹವಾಲ್ದಾರ, ನಾಯಕ್ಸ್ ಸುಬೇದಾರ್ ರಾಗಿ ಡೆಲ್ಲಿ, ರಾಜಸ್ಥಾನ್, ಪಂಜಾಬ್, ಹರಿಯಾಣ, ಗುಜರಾತ್, ಜಮ್ಮು-ಕಾಶ್ಮೀರ್, ಲಡಾಖ್ ಬೆಂಗಳೂರು ಹೀಗೆ ಹಲವು ಕಡೆಗಳಲ್ಲಿ ಸೇವೆ ಸಲ್ಲಿಸಿ ಜೂ.30ರಂದು ಸುಬೇದಾರ್ ರಾಗಿ ನಿವೃತ್ತರಾದರು.

ಇನ್ನೋರ್ವ ಮುಖ್ಯ ವ್ಯಕ್ತಿ ಯಾದವ ಗೌಡ ರವರು 31 ವರ್ಷ 6 ತಿಂಗಳು ಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದರು. ಇವರು ವೆಟರಿನರಿ ಡಿಪ್ಲೋಮ ವಿದ್ಯಾಭ್ಯಾಸ ಮುಗಿಸಿ ಕಿರಿಯ ಪಶು ವೈದ್ಯ ಪರೀಕ್ಷಕರು, ಹಿರಿಯ ಪಶು ವೈದ್ಯ ಪರೀಕ್ಷಕರಾಗಿ ಜಿಲ್ಲಾ ಉಪ ನಿರ್ದೇಶಕರ ಕಛೇರಿ ಮಂಗಳೂರು, ಪಶು ವೈದ್ಯ ಆಸ್ಪತ್ರೆ ಮಂಗಳೂರು, ವಿ.ಹೆಚ್. ಧರ್ಮಸ್ಥಳ, ಪಿ.ವಿ.ಸಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಅರಸಿನಮಕ್ಕಿ-ಕಳೆಂಜ ಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು.

ಈ ಸಂದರ್ಭದಲ್ಲಿ ಅಧ್ಯಕ್ಷೆ ಗಿರಿಜಾ, ಉಪಾಧ್ಯಕ್ಷ ವಿಶ್ವನಾಥ ಗೌಡ, ಪಂ. ಅಭಿವೃದ್ಧಿ ಅಧಿಕಾರಿ ಹೊನ್ನಮ್ಮ, ಕಾರ್ಯದರ್ಶಿ ಹೊನ್ನಪ್ಪ, ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯ ಗಂಗಾಧರ್ ಕೆ. ಕಾರ್ಯಕ್ರಮ ನಿರೂಪಿಸಿದರು.

Related posts

ಧಾರಾಕಾರವಾಗಿ ಸುರಿದ ಗಾಳಿ ಮಳೆ: ಮೇಲಂತಬೆಟ್ಟು ಕೆಲವು ಮನೆಗಳ ಮೇಲ್ಛಾವಣಿ ಕುಸಿತ

Suddi Udaya

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ಉಜಿರೆ: ಗಾಳಿ ಮಳೆಗೆ ರಸ್ತೆಗೆ ಬಿದ್ದ ಮರ ಉಜಿರೆ ಗ್ರಾ.ಪಂ. ನಿಂದ ತೆರವು ಕಾರ್ಯ

Suddi Udaya

ಉಜಿರೆ: “ಯಕ್ಷಸಿರಿ” ಪ್ರಶಸ್ತಿಗೆ ಆಯ್ಕೆಯಾದ ದಿವಾಕರ್ ದಾಸ್ ಕಾವಳಕಟ್ಟೆ ರವರಿಗೆ ಗೌರವಾರ್ಪಣೆ

Suddi Udaya

ಕುಣಿತಾ ಭಜನೆಯಲ್ಲಿ ಶ್ರೀ ವಿದ್ಯಾ ಸರಸ್ವತಿ ಭಜನಾ ಮಂಡಳಿ ಪಾರೆಂಕಿ ತಂಡಕ್ಕೆ ಪ್ರಥಮ ಸ್ಥಾನ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ

Suddi Udaya
error: Content is protected !!