26.9 C
ಪುತ್ತೂರು, ಬೆಳ್ತಂಗಡಿ
June 7, 2025
ಅಪರಾಧ ಸುದ್ದಿ

ಹಾಡು ಹಗಲೇ ಲಾಯಿಲದ ದೇಜಪ್ಪರ ಮನೆಗೆ ನುಗ್ಗಿದ ಕಳ್ಳರು: ರೂ.20 ಸಾವಿರ ನಗದು ಸಹಿತ ರೂ.40 ಸಾವಿರ ಮೌಲ್ಯದ ಚಿನ್ನಾಭರಣ ಕಳವು

ಬೆಳ್ತಂಗಡಿ : ಹಾಡು ಹಗಲೇ
ಲಾಯಿಲ ಗ್ರಾಮದ ನಿವಾಸಿ ದೇಜಪ್ಪ ಎಂಬವರ ಮನೆಗೆ ನುಗ್ಗಿದ ಕಳ್ಳರು ರೂ.20 ಸಾವಿರ ನಗದು ಸಹಿತ ಚಿನ್ನಾಭರಣ ಕಳವುಗೈದ ಘಟನೆ ಆ.10ರಂದು ವರದಿಯಾಗಿದೆ.
ಆ.10 ರಂದು ಬೆಳಿಗ್ಗೆ 8.30 ರಿಂದ ಸಂಜೆ 5.30ರ ಅವಧಿಯಲ್ಲಿ ದೇಜಪ್ಪರ ಮನೆಯಲ್ಲಿ ಯಾರು ಇಲ್ಲದ ವೇಳೆ ಯಾರೋ ಕಳ್ಳರು ಮನೆಯ ಬಲಬದಿ ಇರುವ ಸ್ಟೋರ್ ರೂಂ ನಿಂದ ಮರದ ಕಿಟಕಿಯನ್ನು ಯಾವುದೋ ಆಯುಧದಿಂದ ಮುರಿದು ಗೋಡ್ರೇಜ್ ನ ಬೀಗವನ್ನು ಅಲ್ಲಿಯೇ ಇಟ್ಟಿದ್ದ ಕೀಯಿಂದ ಲಾಕ್ ತೆಗೆದು ಗೊಡ್ರೇಜಿನಲ್ಲಿ ಇಟ್ಟಿರುವ ಸುಮಾರು ರೂ.20 ಸಾವಿರ ನಗದು ಮತ್ತು ಸುಮಾರು 8 ಗ್ರಾಂ ತೂಕದ ಚಿನ್ನಾಭರಣ ಅಂದಾಜು ಮೌಲ್ಯ ಸುಮಾರು 40ಸಾವಿರ ವನ್ನು ಯಾರೋ ಕಳ್ಳರು ಕಳ್ಳತನ ಮಾಡಿರುವುದಾಗಿ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದೆ.
. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ ನಂ 73/2023 ಕಲಂ;454,380 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾತ್ಮಕ ವಿಡಿಯೋ: ಯುವಕನ ಮೇಲೆ ಪ್ರಕರಣ ದಾಖಲು

Suddi Udaya

ಪಿಕಪ್ ವಾಹನ ಮತ್ತು ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಮೃತ್ಯು

Suddi Udaya

ಅರಸಿನಮಕ್ಕಿ ಕಾನದಲ್ಲಿ ಬುಲೆಟ್ ಬೈಕ್‌ಗೆಇನೋವಾ ಕಾರು ಡಿಕ್ಕಿಬೈಕ್ ಸವಾರನಿಗೆ ತೀವ್ರ ಗಾಯ

Suddi Udaya

ಸವಣಾಲಿನಲ್ಲಿ ಬೈಕ್- ಬೈಕ್ ನಡುವೆ ಅಪಘಾತ : ಆಳದಂಗಡಿ ಹಾ.ಉ.ಸ.ಸಂಘದ ಮಾಜಿ ಕಾರ್ಯದರ್ಶಿ ಹೆನ್ರಿ ಡಿ’ ಸೋಜ ಮೃತ್ಯು

Suddi Udaya

ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ: ಆರೋಪಿ ನಾರಾವಿಯ ಯುವಕನಿಗೆ ನ್ಯಾಯಾಂಗ ಬಂಧನ

Suddi Udaya

ಪಟ್ರಮೆ ಪಟ್ಟೂರಿನ ನೆರೆಕರೆಯ ಇಬ್ಬರು ಯುವತಿಯರು ಮೃತ್ಯು: ಆತ್ಮಹತ್ಯೆ ಮಾಡಿಕೊಂಡ ಶಂಕೆ : ಮುಂದುವರಿದ ಪೊಲೀಸರ ತನಿಖೆ

Suddi Udaya
error: Content is protected !!