ರೆಖ್ಯ : 24 ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ರಚನೆ

Suddi Udaya

ರೆಖ್ಯ : 24 ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ರಚನೆಯು ಇತ್ತೀಚೆಗೆ ನಡೆಯಿತು. ಅಧ್ಯಕ್ಷರಾಗಿ ನವೀನ್ ಕೆ ರೆಖ್ಯ, ಉಪಾಧ್ಯಕ್ಷರಾಗಿ ಸತೀಶ್ ಜಿ.ಆರ್., ಕಾರ್ಯದರ್ಶಿಯಾಗಿ ಪ್ರದೀಪ್ ಸಂಪಿಗೆತ್ತಡಿ, ಸಹ ಕಾರ್ಯದರ್ಶಿಯಾಗಿ ಪುಷ್ಪಾವತಿ ಎಂಜಿರ ಮತ್ತು ಚೇತನ್ ಕೆರೆಜಾಲು ಆಯ್ಕೆಯಾದರು.

ಸದಸ್ಯರಾಗಿ ಸುನೀಲ್, ನಿತಿನ್ ಕೆಲೆಂಜಿನೊಡಿ, ಬೇಬಿ ಕಿರಣ್, ನಿತ್ಯಾನಂದ, ಕಾರ್ತಿಕ್ ಎನ್ಮಡ್ಕ, ಗುರುಪ್ರಸಾದ್, ಆನಂದ, ಕಿರಣ್ ಕೆರೆಜಾಲು, ಜಗದೀಶ್ ನಾಗಂಡ, ಶಿವರಾಜ್ ಇವರುಗಳು ಆಯ್ಕೆಯಾದರು.

ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣ ಸಮಿತಿಯ ನೇತೃತ್ವದಲ್ಲಿ ರೆಖ್ಯದಲ್ಲಿ 24 ನೇ ವರ್ಷದ ” ಮೊಸರು ಕುಡಿಕೆ ಉತ್ಸವ” ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವು ಸಪ್ಟೆಂಬರ್ 06 ರಂದು ರೆಖ್ಯದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಬೆಳಿಗ್ಗೆ ಗಂಟೆ 6.00 ರಿಂದ ಗಣಹೋಮದೊಂದಿಗೆ ವಿವಿಧ ಅಟೋಟ ಸ್ಪರ್ಧೆಗಳು ನಡೆಯಲಿದೆ.

Leave a Comment

error: Content is protected !!