ಓಡಿಲ್ನಾಳ: ಶಕ್ತಿ ಯುವಕ ಮಂಡಲ ರೇಷ್ಮೆ ರೋಡ್ ಇದರ ವಾರ್ಷಿಕ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಓಡಿಲ್ನಾಳ: ಶಕ್ತಿ ಯುವಕ ಮಂಡಲ ರೇಷ್ಮೆ ರೋಡ್ ಇದರ ವಾರ್ಷಿಕ ಮಹಾಸಭೆ ಮತ್ತು77 ನೇ ಸ್ವಾತಂತ್ರೋತ್ಸವ ಆ.15 ರಂದು ಸಂಘದ ವಠಾರದಲ್ಲಿ ಅಧ್ಯಕ್ಷರಾದ ಸಂತೋಷ್ ಗೌಡ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.


ಗೌರವಾಧ್ಯಕ್ಷರಾಗಿ ಜಯಂತ್ ನಾಯಕ್, ಅಧ್ಯಕ್ಷರಾಗಿ ಉಮೇಶ್ ಕುಲಾಲ್, ಉಪಾಧ್ಯಕ್ಷರಾಗಿ ಬಾಲಕೃಷ್ಣ ಬನ ಮತ್ತು ಸಂತೋಷ್ ಆರ್ ಗೌಡ ಪ್ರಧಾನ ಕಾರ್ಯದರ್ಶಿಯಾಗಿ ತಾರನಾಥ ನಾಯ್ಕ್ ಕಾರ್ಯದರ್ಶಿಗಳಾಗಿ ಸಂತೋಷ್ ಭಾರ್ಗವಿ ಮತ್ತು ವಿಖ್ಯಾತ್ ಶೆಟ್ಟಿ ಸಂಘಟನಾ ಕಾರ್ಯದರ್ಶಿಯಾಗಿ ಸದಾನಂದ ಮೂಲ್ಯ, ಕೋಶಾಧಿಕಾರಿಯಾಗಿ ಭೋಜ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ತೋಮಸ್ ಪಿಂಟೋ ಮತ್ತು ಸುದೇಶ್ ಆರ್ ಗೌಡ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಬಾಲಕೃಷ್ಣ ಕುಲಾಲ್ ಮತ್ತು ಯೋಗೀಶ್ ಪಿಂಕಿ, ಮಾಧ್ಯಮ ಕಾರ್ಯದರ್ಶಿಯಾಗಿ ಗಿಲ್ಬರ್ಟ್ ಪಿಂಟೋ ಮತ್ತು ಸತೀಶ್ ಸಾಲಿಯನ್, ಕಾರ್ಯಕಾರಿ ಸಮಿತಿ ಸದಸ್ಯರು ಸಿರಿಲ್ ಪಿಂಟೊ, ದೇವಣ್ಣ ಕುಲಾಲ್, ವಿಶ್ವನಾಥ್ ಕುಲಾಲ್, ಅಶೋಕ್ ಶೆಟ್ಟಿ ಕೊಂಡೆ ಮಾರ್ ಶಿವಪ್ರಸಾದ್ ಅಶ್ವತ್ ನಗರ ಆಯ್ಕೆಯಾದರು.

Leave a Comment

error: Content is protected !!