25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೆಂಪುಕಲ್ಲು-ಮರಳು ಸಮಸ್ಯೆ, ಟಿಪ್ಪರ್ ಚಾಲಕ-ಮಾಲಕರು ಕಂಗಾಲು

ಬೆಳ್ತಂಗಡಿ: ಕೆಂಪು ಕಲ್ಲು ಮತ್ತು ಮರಳು ಇವೆರಡನ್ನೂ ಉಪಯೋಗಿಸಿಕೊಂಡು ಮಾಡುವ ಕೆಲಸ ಕಾರ್ಯಗಳಿಗೆ ಸಾವಿರಾರು ಕಾರ್ಮಿಕರು ಅವಲಂಬಿತವಾಗಿದ್ದು ಇದೀಗ ಕೆಲಸವಿಲ್ಲದೆ ಟಿಪ್ಪರ್ ಚಾಲಕ-ಮಾಲಕರಿಗೆ ಸಮಸ್ಯೆಯಾಗಿದೆ ಎಂದು ಯುವ ಉದ್ಯಮಿ ಬಳಂಜ ಪ್ರವೀಣ್ ಪೂಜಾರಿ ಹೇಳಿದ್ದಾರೆ.

ಇವುಗಳ ಸಾಗಾಟದ ವಾಹನದ ಮೇಲೆ ಅದೆಷ್ಟು ಸಾಲ ಇನ್ಸುರೆನ್ಸ್, ಟ್ಯಾಕ್ಸ್, ಕಟ್ಟಿ ತಮ್ಮ ವಾಹನಗಳನ್ನು ಮಾಲಕರು ಮನೆಯಲ್ಲಿಯೇ ನಿಲ್ಲಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.ಪ್ರತಿಯೊಬ್ಬರೂ ಉಪಯೋಗಿಸಲ್ಪಡುವ ಇಂತಹ ಅಗತ್ಯ ವಸ್ತುಗಳ ಮೇಲಾಗಿರುವ ಈ ಸಮಸ್ಯೆಯನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಅನುಮತಿ ನೀಡುವಂತೆ ಕಾನೂನು ಮಾಡಬೇಕಾಗಿರುವುದು ಉತ್ತಮ.ಒಂದು ವೇಳೆ ಅನುಮತಿ ನೀಡಲು ವಿಳಂಬವಾಗಿ ಇದೇ ಪರಿಸ್ಥಿತಿ ಮುಂದುವರೆದರೆ ಅದೆಷ್ಟು ಕೂಲಿ ಕಾರ್ಮಿಕರು, ಮೇಸ್ತ್ರಿ ಕೆಲಸ, ವೈರಿಂಗ್ ಕೆಲಸದವರು,ಹಾರ್ಡ್‌ವೇರ್ ಅಂಗಡಿಯವರು,ಪೈಂಟ್ ಕೆಲಸದವರು, ಇನ್ನು ಹಲವಾರು ಕಾರ್ಮಿಕರು ತಮ್ಮ ದುಡಿಮೆಯನ್ನು ನಂಬಿಕೊಂಡು ಸಾಲ ಮಾಡಿ ದುಡಿಮೆಯಿಲ್ಲದೇ ಊರು ಬಿಡುವ ಪರಿಸ್ಥಿತಿ ನಿರ್ಮಾಣವಾಗಲಿದೆ.ಜನಪರ ಕಾಳಜಿಯಿಂದ ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಆಡಳಿತ ವ್ಯವಸ್ಥೆ ಆದಷ್ಟು ಬೇಗ ಅನುಮತಿಯನ್ನು ನೀಡಿ ಕಾರ್ಮಿಕ ವರ್ಗಕ್ಕೆ ಧೈರ್ಯ ತುಂಬಬೇಕಾಗಿದೆ ಎಂದವರು ತಿಳಿಸಿದ್ದಾರೆ.

Related posts

ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ನಿಯೋಗದಿಂದ ಪ್ರಕೃತಿ ವಿಕೋಪಕ್ಕೆ ಹಾನಿಯಾಗಿರುವ ಮನೆಗಳಿಗೆ ಭೇಟಿ

Suddi Udaya

ಬೆಳ್ತಂಗಡಿ: ಆದಿನಾಥ್ ಬಜಾಜ್ ನಲ್ಲಿ ಹಬ್ಬಗಳ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್

Suddi Udaya

ಆಪರೇಷನ್ ಸಿಂಧೂರ: ಕುರಾಯ-ಬಂದಾರು ಶ್ರೀ ಸದಾಶಿವ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ

Suddi Udaya

ಗೇರುಕಟ್ಟೆ :ಸಂವಿಧಾನ ಜಾಗೃತಿ ಜಾಥಾ

Suddi Udaya

ಧರ್ಮಸ್ಥಳ: ನಾರ್ಯ ನಿವಾಸಿ ಪ್ರಶಾಂತ್ ಗೌಡ ಅಸೌಖ್ಯದಿಂದ ನಿಧನ

Suddi Udaya

ನಾವೂರು ಸೋಷಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಕೆಸರುಗದ್ದೆ ಕ್ರೀಡಾಕೂಟ

Suddi Udaya
error: Content is protected !!