July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಾಜೂರು ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಕಾಜೂರು ಶಾಲಾ ವಠಾರದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯು ನಡೆಯಿತು. ಕಾಜೂರು ದರ್ಗಾ ಸಮಿತಿ ಅಧ್ಯಕ್ಷರಾದ ಕೆ ಯು ಇಬ್ರಾಹಿಂ ದ್ವಜಾರೋಹಣಗೈದರು. ಸಯ್ಯಿದ್ ಝೈನುಲ್ ಆಬಿದ್ ಜಮಲುಲೈಲಿ ತಂಙಳ್ ರವರು ಶುಭ ಸಂದೇಶ ನೀಡಿ ಆಶಿರ್ವಚನ ಮಾಡಿದರು.

ಮುದರ್ರಿಸರಾದ ತೌಸೀಫ್ ಸಅದಿ ಹರೇಕಳ ಹಾಗೂ ಶಿಕ್ಷಣ ಸಂಸ್ಥೆಗಳ ಮಾರ್ಗದರ್ಶಕ ಕೆ ಎಂ ಸಿದ್ದೀಕ್ ಮೋಂಟುಗೋಳಿ ಶುಭಕೋರಿದರು. ದರ್ಗಾ ಸಮಿತಿ ಪ್ರ.ಕಾರ್ಯದರ್ಶಿ ಹಾಗೂ ರಾಹ ಎಜ್ಯುಕೇಶನಲ್ ಟ್ರಸ್ಟ್ ಚೇರ್ಮನ್ ಜೆ ಹೆಚ್ ಅಬೂಬಕರ್ ಸಿದ್ದೀಕ್, ದರ್ಗಾ ಸಮಿತಿ ಕೋಶಾಧಿಕಾರಿ ಮಹಮ್ಮದ್ ಕಮಾಲ್, ರಾಹ ಎಜ್ಯುಕೇಶನ್ ಸಂಚಾಲಕರಾದ ಅಶ್ಫಾಕ್, ಫೈನಾನ್ಸ್ ಸೆಕ್ರೇಟರಿ ಆಸಿಫ್ ಜೆ.ಎಚ್, ಸದರ್ ಉಸ್ತಾದ್ ಜಮಾಲ್ ಲತೀಫಿ, ಆರ್.ಜೆ.ಎಂ ಕಾಜೂರು ಮಾಜಿ ಅಧ್ಯಕ್ಷರಾದ ಬಿ ಎ ಯೂಸುಫ್ ಶರೀಫ್ ಹಾಗೂ ದರ್ಗಾ ಸಮಿತಿಯ ಪದಾದಿಕಾರಿಗಳು, ನಿರ್ದೇಶಕರುಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ಸೆಸ್ಸೆಫ್, ಎಸ್ ವೈ ಎಸ್, ಅಂಗ ಸಂಸ್ಥೆಗಳಾದ ಸ್ವಲಾತ್ ಕಮಿಟಿ, ದಫ್ ಸಮಿತಿ, ಕೆ.ಡಿ.ಸಿ ಪದಾಧಿಕಾರಿಗಳು ಮತ್ತು ಸದಸ್ಯರು, ಕಾಜೂರು, ಕುಕ್ಕಾವು, ದಿಡುಪೆ ಮತ್ತು ಜಿ ನಗರ ಮದ್ರಸಗಳ ಆಡಳಿತ ಸಮಿತಿ, ಶಾಲಾ ಶಿಕ್ಷಕ-ರಕ್ಷಕ ಸಮಿತಿ ಮತ್ತು ಮದ್ರಸ ಶಿಕ್ಷಕ-ರಕ್ಷಕ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದರು. ಮದ್ರಸ, ದರ್ಸ್, ಪ್ರೌಢಶಾಲೆ, ಪಬ್ಲಿಕ್ ಸ್ಕೂಲ್, ಶರೀಅತ್ ಕಾಲೇಜು, ಪಿಯುಸಿ ಸಿಬ್ಬಂದಿ ವರ್ಗ, ಜಮಾಅತ್ ಭಾಂದವರು, ವಿದ್ಯಾರ್ಥಿಗಳು ಭಾಗವಹಿಸಿದರು.

ಈ ಸಂದರ್ಭದಲ್ಲಿ ರಾಹ ಪಬ್ಲಿಕ್ ಸ್ಕೂಲ್ ಇದರ ನೂತನ ಶಾಲಾ ವಾಹನ ಲೋಕಾರ್ಪಣೆ ಮಾಡಲಾಯಿತು.

Related posts

ಚಾರ್ಮಾಡಿ ಅರಣ್ಯದಲ್ಲಿ ಭಾರೀ ಬೆಂಕಿ

Suddi Udaya

ಕೊಕ್ಕಡ ಪರಿಸರದಲ್ಲಿ ಭೀಕರ ಬಿರುಗಾಳಿ ಮಳೆ: ಮರ ಉರುಳಿ ಬಿದ್ದರೂ ಹಾನಿಯಾಗದ ದೈವದ ಗುಡಿ: ದೈವಗಳ ಕಾನಿ೯ಕ ಭಕ್ತರ‌ ಅನಿಸಿಕೆ

Suddi Udaya

ಎಸ್‌.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ಮತ್ತು ಸಂಶೋಧನಾ ವಿಭಾಗದಿಂದ ಅಗ್ನಿ ಸುರಕ್ಷತೆ, ಆರೋಗ್ಯ ಸುರಕ್ಷತೆ, ಹಾಗೂ ವಿಪತ್ತು ನಿರ್ವಹಣೆ ಕುರಿತು ಜಾಗೃತಿ ತರಬೇತಿ

Suddi Udaya

ಅಶ್ರಫ್ ಆಲಿಕುಂಞಿ (ಅಚ್ಚು) ಮುಂಡಾಜೆ ಅವರಿಗೆ ಲಯನ್ಸ್ ಜಿಲ್ಲಾ “ಗೋಲ್ಡನ್ ಅಸಿಸ್ಟೆಂಟ್ ಡಿಸ್ಟ್ರಿಕ್ಟ್ ಕಾರ್ಡಿನೇಟರ್” ಪುರಸ್ಕಾರ

Suddi Udaya

ಸುದ್ದಿ ಉದಯ ಪತ್ರಿಕೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ್

Suddi Udaya

ಎ.ಆರ್.ಎಂ ಕಿಯಾ ಆರು ವರ್ಷದ ಯಶಸ್ಸು: 9,000ನೇ ಕಾರು ವಿತರಣೆ

Suddi Udaya
error: Content is protected !!