ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆ ಕಳಿಯ ‘ಬಿ’ ಕಾರ್ಯಕ್ಷೇತ್ರದಿಂದ ಸುರಕ್ಷ ಯೋಜನೆ ಅಡಿಯಲ್ಲಿ ಗೀತಾ ರವರಿಗೆ ಚೆಕ್ ಹಸ್ತಾಂತರ

Suddi Udaya

ಕಳಿಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಬೆಳ್ತಂಗಡಿ ವಲಯದ, ಕಳಿಯ “ಬಿ” ಕಾರ್ಯಕ್ಷೇತ್ರದಲ್ಲಿ ಕಳಿಯ ಗ್ರಾಮದ ಹೀರ್ಯ ಜಗದೀಶ್ ರವರ ಪತ್ನಿ ಗೀತಾ ರವರಿಗೆ ಅನಾರೋಗ್ಯ ಚಿಕಿತ್ಸೆ ವೆಚ್ಚ ಸಂಪೂರ್ಣ ಸುರಕ್ಷ ಯೋಜನೆ ಅಡಿಯಲ್ಲಿ ರೂ.23000 ಮೊತ್ತದ ಚೆಕ್ ನ್ನು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಸುಭಾಷಿಣಿ ಜನಾರ್ಧನ ಗೌಡ, ವರ ಮಹಾಲಕ್ಷ್ಮಿ ಪೂಜಾ ಸಮಿತಿ ನಿಕಟ ಪೂರ್ವ ಅಧ್ಯಕ್ಷೆ ಮಮತಾ ವಿ. ಆಳ್ವ,ತಾಲೂಕು ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಕುಸುಮ ಎನ್ ಬಂಗೇರ, ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ ಮಜಲ್ ಮತ್ತು ಪುಷ್ಪ, ನ್ಯಾಯತರ್ಪು ಒಕ್ಕೂಟದ ಅಧ್ಯಕ್ಷರಾದ ಜನಾರ್ಧನ ಗೌಡ, ಕಳಿಯ ಬಿ ಒಕ್ಕೂಟದ ಅಧ್ಯಕ್ಷರಾದ ಪ್ರಕಾಶ್ ಮೆರ್ಲ ಹಾಗೂ ಕೃಷಿ ಮೇಲ್ವಿಚಾರಕ ರಾದ ರಾಮ್ ಕುಮಾರ್ ಮತ್ತು ವಲಯದ ಮೇಲ್ವಿಚಾರಕರಾದ ಹರೀಶ್ ಗೌಡ, ಊರಿನ ಗಣ್ಯರು ಸಂಘ ಸಂಸ್ಥೆ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಹಸ್ತಾಂತರಿಸಿ ಯೋಗ ಕ್ಷೇಮ ವಿಚಾರಿಸಿದರು.

Leave a Comment

error: Content is protected !!