ಭಾರತೀಯ ಲೆಕ್ಕ ಪರಿಶೋಧಕರ ಸಂಘದಿಂದ ಸಿಎ ಸಾಧಕಿ ನಿರೀಕ್ಷಾ ಎನ್.ನಾವರರಿಗೆ ಗೌರವಾರ್ಪಣೆ

Suddi Udaya

ಬೆಳ್ತಂಗಡಿ: ಭಾರತೀಯ ಲೆಕ್ಕ ಪರಿಶೋಧಕರ ಸಂಘ( Institute of Chartered Accountant of India)(ICAI)ದ SIRC ಮಂಗಳೂರು ಶಾಖೆ ಮತ್ತು ICAI ಯ SICASA ವತಿಯಿಂದ ಸಿ.ಎ.ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ICAI ಭವನ ಪಡೀಲ್‌ ನಲ್ಲಿ ನಡೆಯಿತು.

ಮಂಗಳೂರಿನ ಟಾಪರ್ ಆಗಿ ಎರಡು ವಿದ್ಯಾರ್ಥಿಗಳು ಮೂಡಿ ಬಂದಿದ್ದು ಅದರಲ್ಲಿ ಓರ್ವಳಾದ ಕುಮಾರಿ ಸಿ.ಎ ನಿರೀಕ್ಷಾ ಎನ್ ನಾವರ ಇವರನ್ನು ಸಂಸ್ಥೆಯಿಂದ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಡಾ.ಎಡ್ಮಂಡ್ ಫೆರ್ನಾಂಡಿಸ್ ,ICAI ಯ SIRC ನ ಮಂಗಳೂರು ಶಾಖೆಯ ಸಿ.ಎ.ಮಮತಾ ರಾವ್ ,ಸಿ ಎ ಗೌತಮ್ ಪೈ ಉಪಸ್ಥಿತರಿದ್ದರು.

Leave a Comment

error: Content is protected !!