24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ಇಂಗ್ಲೆಂಡ್ ನಲ್ಲಿ ಗುರುವಾಯನಕೆರೆಯ 12 ವರ್ಷದ ಬಾಲಕನ ಮಹಾನ್ ಸಾಧನೆ- ಬ್ರಿಟೀಷ್ ನ್ಯಾಷನಲ್ ಚಾಂಪಿಯನ್ ಶಿಪ್ ನ 4ನೇ ಸುತ್ತಿನಲ್ಲಿ ಪ್ರಶಸ್ತಿ ಪಡೆದ ಕಾರ್ ರೇಸರ್ ಕನಿಷ್ಕ್ ರಾವ್

ಬೆಳ್ತಂಗಡಿ : ತಾಲೂಕಿನ ಗುರುವಾಯನಕೆರೆಯ ಯಡೂ೯ರು ನಿವಾಸಿಯಾಗಿರುವ ಈಗ ಇಂಗ್ಲೆಡ್ ನಲ್ಲಿ ಉದ್ಯೋಗದಲ್ಲಿರುವ ಕುಮಾರ್ ಮತ್ತು ಮಾನಸ ದಂಪತಿಯ ಪುತ್ರ ಕನಿಷ್ಕ್ ರಾವ್ ಈ ಬಾರಿ ಬ್ರಿಟೀಷ್ ನ್ಯಾಷನಲ್ ಚಾಂಪಿಯನ್ ಶಿಪ್ ರೇಸ್ ನ ನಾಲ್ಕನೇ ರೌಂಡ್ ನಲ್ಲಿ ಗೆದ್ದು ಬೀಗಿದ್ದಾರೆ. ಆಗಸ್ಟ್ 20ರಂದು ಲಂಡನ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಕನಿಷ್ ಮಿಂಚಿನ ವೇಗದಲ್ಲಿ ಚಲಿಸಿ ವಿಜೇತರಾಗಿದ್ದಾರೆ. ಕನಿಷ್ಠ ನಿನ್ನೆ Scotland ನಲ್ಲಿ ನಡೆದ British national championship ಅಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. Qualifying race ಅಲ್ಲಿ 6ನೇ ಸ್ಥಾನ ಪಡೆದು, heats ಅಲ್ಲಿ 5ನೇ ಸ್ಥಾನ ಪಡೆದಿರುತ್ತಾರೆ. ನಂತರ prefinal ರೇಸ್ ಅಲ್ಲಿ 2nd finish ಮಾಡಿ, ಫೈನಲ್ ನಲ್ಲಿ first position ಅಲ್ಲಿ win ಆಗಿದ್ದಾರೆ ಎಂದು ಅವರ ತಂದೆ ಕುಮಾರ್ ಸುದ್ದಿ ಉದಯಕ್ಕೆ ಮಾಹಿತಿ ನೀಡಿದ್ದಾರೆ.

12 ವರ್ಷದ ಬಾಲಕ ಕನಿಷ್ಠ ರಾವ್ ಫಾರ್ಮಲಾ 1ಚಾಂಪಿಯನ್ ಆಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಕಾರ್ ರೇಸಿಂಗ್ ನಲ್ಲಿ ಭಾಗಿಯಾಗುತ್ತಿರುವ ಕನಿಷ್ಠ ಏಳು ತಿಂಗಳ ಹಿಂದೆ ಕನಿಷ್ಕ ತನ್ನ ತವರೂರು ಗುರುವಾಯನಕೆರೆ ಯಡೂ೯ರಿನ ಮನೆಗೆ ಬಂದು ಹೋಗಿದ್ದರು. ತುಳುವಿನಲ್ಲಿ ನಿಗ೯ಳವಾಗಿ ಮಾತನಾಡುವ ಕನಿಷ್ಠ ಕಳೆದ ಬಾರಿ ಊರಿಗೆ ಬಂದಾಗ ತನ್ನ ಫೆವರಿಟ್ ಫುಡ್, ಆಸಕ್ತಿ , ಹವ್ಯಾಸ ಗಳ ಬಗ್ಗೆ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದರು.

ತಾಲೂಕಿನ ಪ್ರತಿಭಾನ್ವಿತ ಬಾಲಕ, ಫಾರ್ಮುಲಾ ವನ್ ರೇಸ್ ನಲ್ಲಿ ಸಾಧನೆ ಮಾಡುವ ಭರವಸೆ ಹೊಂದಿದ್ದು, ಇವರಿಗೆ ” ಸುದ್ದಿ ಉದಯ ಬಳಗ” ಶುಭ ಹಾರೈಸುತ್ತದೆ.

Related posts

ಉಜಿರೆ ಗ್ರಾಮ ಪಂಚಾಯತ್ ದ್ವಿತೀಯ ಹಂತದ ಗ್ರಾಮ ಸಭೆ

Suddi Udaya

ಪ್ರತಿಭಾ ಕಾರಂಜಿ ಮಿಮಿಕ್ರಿ ಸ್ಪರ್ಧೆ: ಮಚ್ಚಿನ ಸ.ಪ್ರೌ. ಶಾಲೆಯ ವಿದ್ಯಾರ್ಥಿ ಮನೀಷ್ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya

ಅರಸಿನಮಕ್ಕಿ: ಶ್ರೀ ಗೋಪಾಲಕೃಷ್ಣ ಅ.ಹಿ.ಪ್ರಾ. ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ

Suddi Udaya

ಫಂಡಿಜೆಯಲ್ಲಿ ನಾರಾವಿ ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ

Suddi Udaya

ಧರ್ಮಸ್ಥಳ ಶ್ರೀ ಮಂ.ಅ. ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸರಕಾರದ ಪ್ರಮಾಣ ವಚನ ಸ್ವೀಕಾರ

Suddi Udaya

ನಾರಾವಿ ಕಾಲೇಜಿನಲ್ಲಿ ಉಚಿತ ಫಿಸಿಯೋಥೆರಪಿ ಹಾಗೂ ಹೋಮಿಯೋಪಥಿಕ್ ತಪಸಣಾ ಶಿಬಿರ

Suddi Udaya
error: Content is protected !!