September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಲಯಮಟ್ಟದ ಪ್ರತಿಭಾ ಕಾರಂಜಿ : ಬೆಳ್ತಂಗಡಿ ಶ್ರೀ ಧ. ಮಂ. ಆಂ.ಮಾ. ಶಾಲೆಗೆ ಹಲವಾರು ಪ್ರಶಸ್ತಿ

ಬೆಳ್ತಂಗಡಿ: ಕೊಯ್ಯೂರಿನಲ್ಲಿ ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ಶಾಲೆಯ ವಿದ್ಯಾರ್ಥಿಗಳು ಹಲವಾರು ಪ್ರಶಸ್ತಿಗಳನ್ನು ಮೂಡಿಗೇರಿಸಿಕೊಂಡಿದ್ದಾರೆ.
ಹಿರಿಯ ಪ್ರಾಥಮಿಕ ವಿಭಾಗದ ಅಭಿನಯ ಗೀತೆಯಲ್ಲಿ ಸಂಜನಾ ಎಸ್ ಮೊದಲ ಸ್ಥಾನ, ಕಿರಿಯ ಪ್ರಾಥಮಿಕ ವಿಭಾಗದ ಅಭಿನಯ ಗೀತೆಯಲ್ಲಿ ಅನಘಾ ಮೊದಲ ಸ್ಥಾನ, ಹಿರಿಯ ಪ್ರಾಥಮಿಕ ವಿಭಾಗದ ಕನ್ನಡ ಕಂಠಪಾಠದಲ್ಲಿ ಸಂಜನಾ ಎಸ್ ಮೊದಲ ಸ್ಥಾನ, ಹಿರಿಯ ಪ್ರಾಥಮಿಕ ವಿಭಾಗದ ಇಂಗ್ಲೀಷ್ ಕಂಠಪಾಠದಲ್ಲಿ ರಿತಿಕ ಶಣೈ ಮೂರನೇ ಸ್ಥಾನ, ಚಿತ್ರಕಲೆ ಹಿರಿಯ ಪ್ರಾಥಮಿಕದಲ್ಲಿ ಬೃಂದಾ ಮೊದಲ ಸ್ಥಾನ, ಕ್ಲೇ ಮೂಡಲಿಂಗ್ ಹಿರಿಯ ಪ್ರಾಥಮಿಕ ದಿಶಾ ಮೂರನೇ ಸ್ಥಾನ, ಭಕ್ತಿ ಗೀತೆ ಕಿರಿಯ ಪ್ರಾಥಮಿಕ ಜನೇಶ್ ದ್ವಿತೀಯ ಸ್ಥಾನ, ಲಘು ಸಂಗೀತ ಹಿರಿಯ ಪ್ರಾಥಮಿಕ ಶ್ರೀರಕ್ಷ ಎಂ ಭಟ್ ಮೂರನೇ ಸ್ಥಾನ, ಕಥೆ ಹೇಳುವುದು ಹಿರಿಯ ಪ್ರಾಥಮಿಕ ವಿಭಾಗ ನಿಧಿಶ ಮೊದಲ ಸ್ಥಾನ, ಭಕ್ತಿ ಗೀತೆ ಹಿರಿಯ ಪ್ರಾಥಮಿಕ ವಿಭಾಗ ಪ್ರಾಪ್ತಿವೀ ಶೆಟ್ಟಿ ಮೊದಲ ಸ್ಥಾನ, ಕ್ಲೇ ಮೋಡೆಲಿಂಗ್ ಹಿರಿಯ ಪ್ರಾಥಮಿಕ ವಿಭಾಗ ದೀಪ್ತಾ ದ್ವಿತೀಯ ಸ್ಥಾನ, ಲಘು ಸಂಗೀತ ಕಿರಿಯ ಪ್ರಾಥಮಿಕ ಅಂಜಲಿ ಮೊದಲ ಸ್ಥಾನ, ಕಥೆ ಹೇಳುವುದು ಕಿರಿಯ ಪ್ರಾಥಮಿಕ ದಿಶಾ ಮೊದಲ ಸ್ಥಾನ, ಧಾರ್ಮಿಕ ಪಠಣ ಕಿರಿಯ ಪ್ರಾಥಮಿಕ ಶ್ರೀರಾಮ ಎಂ ಭಟ್ ಮೂರನೇ ಸ್ಥಾನ, ಧಾರ್ಮಿಕ ಪಠಣ ಹಿರಿಯ ಪ್ರಾಥಮಿಕ ಶ್ರೀರಕ್ಷ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಶಾಲಾ ಶಿಕ್ಷಕ ವೃಂದ ಹಾಗೂ ಮುಖ್ಯ ಶಿಕ್ಷಕರಾದ ಶ್ರೀಮತಿ ಹೇಮಲತಾ ಎಂ ಆರ್ ರವರ ಸಹಕಾರದಿಂದ ಮಕ್ಕಳ ಪ್ರತಿಭೆಗೆ ಬಹುಮಾನ ಬಂದಿರುತ್ತದೆ.

Related posts

ಬ್ರೈನ್ ಹ್ಯಾಮರೇಜ್: ಬೆಳ್ತಂಗಡಿ ಗಣೇಶ್ ಹೋಟೆಲ್ ಮಾಲಕ ದಿವಾಕರ ಪ್ರಭು ಆಸ್ಪತ್ರೆಗೆ : ಸ್ಥಿತಿ ಗಂಭೀರ

Suddi Udaya

ಪಡಂಗಡಿ: 6ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

Suddi Udaya

ಬೆಳ್ತಂಗಡಿ: ಸಮಾಜ ಸೇವಕ ಚಾರ್ಮಾಡಿ ಹಸನಬ್ಬರವರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಸೇವೆಯ ಅಂಬುಲೆನ್ಸ್ ಜಿಲ್ಲಾ ಉಸ್ತುವಾರಿ ಸಚಿವರಿಂದ ಲೋಕಾರ್ಪಣೆ

Suddi Udaya

ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗಾಗಿ 30ನೇ ವಸತಿಯುತ ಉಚಿತ ಆರೋಗ್ಯ ತಪಾಸಣೆ, ಜಾಗೃತಿ ಶಿಬಿರ ಹಾಗೂ ಗಾಲಿಕುರ್ಚಿ ಜಾಥಾ:

Suddi Udaya

ಮಿತ್ತಬಾಗಿಲು ಕೂಡಬೆಟ್ಟು ಶ್ರೀ ಸದಾಶಿವ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಉತ್ಸವ: ವಿಶೇಷ ಪೂಜೆ

Suddi Udaya

ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ದ.ಕ. ಜಿಲ್ಲಾ ಘಟಕದ ಅಧ್ಯಕ್ಷರಾಗಿ ಶಿವಪ್ರಸಾದ್ ಅಜಿಲ, ಪ್ರಧಾನ ಸಂಚಾಲಕರಾಗಿ ಡಾ. ನಿರಂಜನ್ ರೈ ನೇಮಕ

Suddi Udaya
error: Content is protected !!