24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವೇಣೂರು ಟೈಲರ್ ಅಸೋಸಿಯೇಷನ್ ನ ಸಮಿತಿಯ ಪದಾಧಿಕಾರಿಗಳು ಹಾಗೂ ಊರವರ ಸಹಕಾರದೊಂದಿಗೆ ಧನಸಹಾಯ ಹಸ್ತಾಂತರ

ವೇಣೂರು : ಇತ್ತೀಚೆಗೆ ಹೆರಿಗೆ ಸಂದರ್ಭದಲ್ಲಿ ನಿಧನರಾದ ವೇಣೂರು ವಲಯದ ಟೈಲರ್ ಅಸೋಸಿಯೇಷನ್ ನ ಸದಸ್ಯೆ ಶಿಲ್ಪಾ ಆಚಾರ್ಯ ಇವರ ಮಗಳ ವಿದ್ಯಾಭ್ಯಾಸಕ್ಕೆಂದು ಸಮಿತಿಯ ಪದಾಧಿಕಾರಿಗಳು ಸದಸ್ಯರು ಹಾಗೂ ಊರವರ ಸಹಕಾರದೊಂದಿಗೆ ಸುಮಾರು ರೂ.50.ಸಾವಿರ ಒಟ್ಟು ಮಾಡಿದ್ದು ಇದರಲ್ಲಿ ಕುಂಭಶ್ರೀ ವಿದ್ಯಾ ಸಂಸ್ಥೆಯಲ್ಲಿ ಕಲಿಯುತ್ತಿರುವ ಶಿಲ್ಪಾ ಅವರ ಮಗಳಾದ ರಾಜೇಶ್ವರಿಯ ಏಳನೇ ತರಗತಿಯ ಪ್ರಸ್ತುತ ವರ್ಷದ ವಿದ್ಯಾಭ್ಯಾಸದ ಶುಲ್ಕ 10,000 ರೂಪಾಯಿಯನ್ನು ,.ಕುಂಭಶ್ರೀ ಸಂಸ್ಥೆಯ ಸಂಚಾಲಕರಾದ ಗಿರೀಶ್. ಕೆ.ಎಚ್.ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಅಸ್ವಿತ್ ಕುಲಾಲ್, ಸಂಸ್ಥೆಯ ಮುಖ್ಯೋಪಾಧ್ಯಯರಾದ ಶ್ರೀಮತಿ ಅಕ್ಷತಾ ಮತ್ತು ಶ್ರೀಮತಿ ಪವಿತ್ರ ಇವರ ಸಮ್ಮುಖದಲ್ಲಿ ನೀಡಲಾಯಿತು.

ಉಳಿದ 40,000 ಹಣವನ್ನು ವೇಣೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಒಂಬತ್ತು ವರ್ಷದ ಅವಧಿಗೆ ಶಿಲ್ಪಾಳ ಮಗಳು ರಾಜೇಶ್ವರಿಯ ಹೆಸರಿನಲ್ಲಿ ಫಿಕ್ಸಡ್ ಡಿಪಾಸಿಟ್ ಮಾಡಿ ಶಿಲ್ಪಾಳ ಮಗಳಾದ ರಾಜೇಶ್ವರಿಗೆ ಮತ್ತು ಪ್ರದೀಪ್ ಆಚಾರ್ಯ ರವರಿಗೆ ವಲಯದ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.


ಈ ಸಂದರ್ಭ ದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ಜಿಲ್ಲಾ ಸಮಿತಿ ಅಧ್ಯಕ್ಷ ಜಯಂತ್ ಉರ್ಲಾಂಡಿ, ಜಿಲ್ಲಾ ಸಮಿತಿಯ ಜೊತೆ ಕಾರ್ಯದರ್ಶಿ ಕುಶಾಲಪ್ಪ ಗೌಡ, ಹಾಗೂತಾಲುಕು ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಉಜಿರೆ, ತಾಲೂಕು ಸಮಿತಿಯ ಉಪಾಧ್ಯಕ್ಷರು ಪ್ರಮೀಳಾ ವೇಣೂರು , ವೇಣೂರು ವಲಯದ ಅಧ್ಯಕ್ಷ ಉಮೇಶ್, ಕಾರ್ಯದರ್ಶಿ ಸುನೀತಾ , ಕೋಶಾಧಿಕಾರಿ ಸುಪ್ರೀತಾ, ಉಪಾಧ್ಯಕ್ಷರಾದ ಯೋಗೀಶ್, ಸುಚಿತ್ರಾ, ಹಾಗೂ ತಾಲೂಕು ಸಮಿತಿ ಸದಸ್ಯರು ರತ್ನಾಕರ ಹೆಗ್ಡೆ, ಆನಂದ್ ಕುಲಾಲ್, ಸಹನ ಶಾಸ್ತ್ರಿ, ಹಾಗೂ ಸಂಘಟನಾ ಕಾರ್ಯದರ್ಶಿಗಳು ಹರೀಶ್, ತುಳಸಿ ಉಪಸ್ಥಿತರಿದ್ದರು.

Related posts

ಮಚ್ಚಿನ ಪ್ರೌಢಶಾಲೆಗೆ ಕ್ರೀಡಾ ಸಾಮಾಗ್ರಿಗಳ ವಿತರಣೆ ಹಾಗೂ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗೆ ವಿವಿಧ ಕ್ರೀಡಾಕೂಟಗಳು

Suddi Udaya

ಶಿಬಾಜೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಯುವತಿ ಮನೆಗೆ ಮೆಸ್ಕಾಂ ವಿಜಿಲೆನ್ಸ್ ಎ ಡಬ್ಲ್ಯೂ ಇ ಪ್ರವೀಣ್ ಹಾಗೂ ಮೆಸ್ಕಾಂ ವಿಜಿಲೆನ್ಸ್ ಪೊಲೀಸ್ ಭೇಟಿ

Suddi Udaya

ಕಡಿರುದ್ಯಾವರ: ಅಕ್ರಮ ಮರಳು ಸಂಗ್ರಹ ಪತ್ತೆ: ಪ್ರಕರಣ ದಾಖಲು

Suddi Udaya

ಡಿ.10: ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ: ಆ.8 ರಂದು ವಿದ್ಯುತ್ ನಿಲುಗಡೆ

Suddi Udaya

ರಾಜ ಕೇಸರಿ ಸಂಘಟನೆಯ 541ನೇ ಸೇವಾ ಯೋಜನೆ: ಉಜಿರೆ ದೊಂಪದ ಪಲ್ಕೆ ಕೋಟಪ್ಪ ಪೂಜಾರಿಯವರಿಗೆ ಸಿಟಿ ಸ್ಕ್ಯಾನಿಂಗ್ ಮಾಡಿಸಲು ಸಹಾಯ ಹಸ್ತ

Suddi Udaya
error: Content is protected !!