September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು: ದಿ ಹೇರ್‌ಲೇರ್ ಮೆನ್ಸ್ ಸೆಲೂನ್ ಉದ್ಘಾಟನೆ: ನೂತನ ಸೆಲೂನನ್ನು ಉದ್ಘಾಟಿಸಿ ಶುಭ ಹಾರೈಸಿದ ಖ್ಯಾತ ವೈದ್ಯ ಡಾ| ಶಾಂತಿಪ್ರಸಾದ್

ವೇಣೂರು: ಇಲ್ಲಿಯ ನೂತನ ಬಸ್ ತಂಗುದಾಣದ ನೆಲಮಹಡಿಯಲ್ಲಿ ನೂತನವಾಗಿ ಅರಂಭಗೊಂಡ ದಿ ಹೇರ್‌ಲೇರ್ ಮೆನ್ಸ್ ಸೆಲೂನ್‌ನ ಉದ್ಘಾಟನೆಯು ಇತ್ತೀಚೆಗೆ ಜರಗಿತು.


ವೇಣೂರಿನ ಪ್ರಖ್ಯಾತ ವೈದ್ಯರಾದ ಡಾ| ಶಾಂತಿಪ್ರಸಾದ್ ಅವರು ನೂತನ ಸೆಲೂನನ್ನು ಉದ್ಘಾಟಿಸಿ, ಶುಭ ಹಾರೈಸಿದರು. ವೇಣೂರು ಗ್ರಾ.ಪಂ. ಅಧ್ಯಕ್ಷರಾದ ನೇಮಯ್ಯ ಕುಲಾಲ್, ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ., ವೆಂಕಟೇಶ್ ಭಂಡಾರಿ ಚಿಕ್ಕಮಗಳೂರು, ದಿವಾಕರ ಭಂಡಾರಿ ನಾರಾವಿ, ಪೂವಪ್ಪ ಭಂಡಾರಿ ಬೆಳ್ತಂಗಡಿ, ಉಮೇಶ್ ಭಂಡಾರಿ ಪಡ್ಡಂದಡ್ಕ, ಅಣ್ಣಿ ಭಂಡಾರಿ ಬೆಳ್ತಂಗಡಿ, ಗುಂಡ್ಯಲ್ಕೆ ಅಶೋಕ್ ಭಂಡಾರಿ, ಗಣೇಶ್ ನರ್ಮದಾ ಸ್ಟುಡಿಯೋ, ನಾಗಪ್ಪ, ಲಿಂಗಪ್ಪ ಮೂಲ್ಯ, ರವೀಂದ್ರ ಭಂಡಾರಿ ಮಂಗಳೂರು ವೇಣೂರಿನ ಉದ್ಯಮಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.


ಸಂಸ್ಥೆಯ ಮಾಲಕರಲ್ಲಿ ಓರ್ವರಾದ ಪ್ರಜ್ವಲ್ ಭಂಡಾರಿ ಮಾತನಾಡಿ, ಮಂಗಳೂರಿನ ಮುಡಿಪು ಮತ್ತು ಕಾಯರ್‌ಗೋಳಿಯಲ್ಲಿ ನಮ್ಮ ಸಂಸ್ಥೆ ಕಾರ್ಯಾಚರಿಸುತ್ತಿದ್ದು, ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತಿದೆ. ವೇಣೂರಿನ ನೂತನ ಸೆಲೂನಲ್ಲೂ ಗ್ರಾಹಕರಿಗೆ ಆಶಾದಾಯಕ ಸೇವೆ ನೀಡಲು ಸನ್ನದ್ಧರಾಗಿದ್ದು, ತ್ವರಿತ ಸೇವೆಗಾಗಿ ಮೂವರು ಸಿಬ್ಬಂದಿ ಕಾರ್ಯಾಚರಿಸುತ್ತಿದ್ದಾರೆ ಎಂದರು. ಸಂಸ್ಥೆಯ ಸಹವರ್ತಿಗಳಾದ ವೇಣೂರು ಮೋಹನ್ ಭಂಡಾರಿ, ಪ್ರಮೋದ್ ಭಂಡಾರಿ ಅತಿಥಿಗಳನ್ನ ಸತ್ಕರಿಸಿದರು.

Related posts

ಮುಂಡಾಜೆ ಕ್ರೈಸ್ಟ್ ಅಕಾಡೆಮಿ ಶಾಲೆಯಲ್ಲಿ ಅಜ್ಜಿ ಅಜ್ಜಂದಿರ ದಿನಾಚರಣೆ

Suddi Udaya

ಬೆಳ್ತಂಗಡಿ ತಾಲೂಕು ಕೃಷಿ ಇಲಾಖೆಯಿಂದ ಆತ್ಮ ಯೋಜನೆಯಡಿ ರೈತರ ಅಧ್ಯಯನ ಪ್ರವಾಸ

Suddi Udaya

ನಿಡ್ಲೆ ಆಯುಷ್ಮಾನ್ ಉಪ ಆರೋಗ್ಯ ಕೇಂದ್ರ ರಾಷ್ಟ್ರಮಟ್ಟದಲ್ಲಿ ಆಯ್ಕೆ

Suddi Udaya

ಕನ್ಯಾಡಿಯ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರಿಂದ ಮುಂಬಯಿ ಬಿಲ್ಲವ ಸಮುದಾಯ ಭವನ, ಗುರುಮಂದಿರ ಉದ್ಘಾಟನೆ

Suddi Udaya

ಕುಕ್ಕವು- ಕೂಡಬೆಟ್ಟು ಸಂಪರ್ಕ ರಸ್ತೆಯ ಪಾದೆ ಕಿರು ಸೇತುವೆ ಬಳಿ ರಸ್ತೆ ಬಿರುಕು: ವಾಹನ ಸಂಚಾರ ಸ್ಥಗಿತ-ಜನರಲ್ಲಿ ಆತಂಕ

Suddi Udaya

ಬಿಜೆಪಿ ಕೊಕ್ಕಡ 237ನೇ ಬೂತು ಸಮಿತಿಯ ಅಧ್ಯಕ್ಷರಾಗಿ ಶಶಿಕುಮಾರ್, ಕಾರ್ಯದರ್ಶಿಯಾಗಿ ಶ್ರೀಧರ್ ಆಯ್ಕೆ

Suddi Udaya
error: Content is protected !!