ಲಾಯಿಲ: ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನ ಬೆಳ್ತಂಗಡಿ ವತಿಯಿಂದ 352 ನೇ ಆರಾಧನಾ ಮಹೋತ್ಸವ

Suddi Udaya

ಬೆಳ್ತಂಗಡಿ: ಲಾಯಿಲ ರಾಘವೇಂದ್ರ ಮಠದಲ್ಲಿ ಆರಾಧನಾ ಮಹೋತ್ಸವದ ಉದ್ಘಾಟನೆಯನ್ನು ಸೆ.1 ರಂದು ದೀಪ ಪ್ರಜ್ವಲನೆಯ ಮುಖಾಂತರ ಉದ್ಯಮಿಗಳಾದ ಮೋಹನ್ ದಾಸ್ ಕೋರ್ನಾಯ ರವರು ನೆರವೇರಿಸಿದರು.

ರಾಘವೇಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಪಿತಾಂಬರ ಹೇರಾಜೆ ಅವರು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಪೃಥ್ವಿ ರಂಜನ್ ರಾವ್, ಶ್ರೀಮತಿ ಶಾರದಾ ಭಟ್ ಮುಗುಳಿ, ಪ್ರೊಫೆಸರ್ ಕೃಷ್ಣಪ್ಪ ಪೂಜಾರಿ ಇತರ ಗಣ್ಯರು ಹಾಜರಿದ್ದರು.

ಕಾರ್ಯದರ್ಶಿ ಶೇಖರ ಬಂಗೇರರವರು ಪ್ರಸ್ತಾಪಿಸಿ ಸ್ವಾಗತಿಸಿದರು. ಕೋಶಾಧಿಕಾರಿ ವಸಂತ ಸುವರ್ಣ ಧನ್ಯವಾದವಿತ್ತರು. ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!