ಮುಂಡಾಜೆ ಯಂಗ್ ಚಾಲೆಂಜರ್ಸ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

Suddi Udaya

ಬೆಳ್ತಂಗಡಿ; 35 ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆ ಇದರ ವತಿಯಿಂದ ಸುವರ್ಣ ವರ್ಷಾಚರಣೆಯ ಸಂಭ್ರಮದಲ್ಲಿರುವ ಲಯನ್ಸ್ ಕ್ಲಬ್ ಬೆಳ್ತಂಗಡಿ ಸಹಕಾರದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಸೆ.10 ರಂದು ಮುಂಡಾಜೆ ವೈ ಸಿ ಭವನದಲ್ಲಿ ಜರುಗಿತು.

ಉದ್ಘಾಟನೆಯನ್ನು ಮುಂಡಾಜೆ ದೇವಸ್ಯ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ರಾಜಗೋಪಾಲ ಭಟ್ ನೆರವೇರಿಸಿ ಆಶೀರ್ವದಿಸಿದರು.ಅಧ್ಯಕ್ಷತೆಯನ್ನು ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಅಧ್ಯಕ್ಷ ಶೀನಪ್ಪ ಗೌಡ ವಹಿಸಿದ್ದರು.

ಮುಖ್ಯ ಅತಿಥಿಯಾಗಿದ್ದ ರೇಷ್ಮೆ ಇಲಾಖೆಯ ನಿವೃತ್ತ ಅಧಿಕಾರಿ ಬಾಬು ಪೂಜಾರಿ ಕೂಳೂರು ಧಾರ್ಮಿಕ ಚಿಂತನೆ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಸದಸ್ಯರಾದ ನಾಮದೇವ ರಾವ್ ಮತ್ತು ಅಶ್ರಫ್ ಆಲಿಕುಂಞಿ, ಯಂಗ್ ಚಾಲೆಂಜರ್ಸ್ ಸಂಘದ ನಿರ್ದೇಶಕ ಮಂಡಳಿ ಮತ್ತು ಪ್ರಮುಖರಾದ ರಾಘವ ಶೆಟ್ಟಿ ನೆಯ್ಯಾಲು, ಡಾ. ಶಿವಾನಂದ ಸ್ವಾಮಿ ಪರಮುಖ, ವಿಜಯ ಆರ್, ಸುರೇಶ್ ಗೌಡ, ಕಸ್ತೂರಿ ಕೇಶವ್, ಶಶಿಧರ ಠೋಸರ್, ಶೀನ, ಉದಯ ಗೌಡ, ಪರಮೇಶ್ವರ ಮೊದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದ ಪ್ರಯುಕ್ತ ಪುಟಾಣಿಗಳಿಗೆ ಭಕ್ತಿ ಗೀತೆ, ವಲಯ ಮಟ್ಟದ ಕೇರಂ ಪಂದ್ಯಾಟ ನಡೆಯಿತು.

Leave a Comment

error: Content is protected !!