ಮಡಂತ್ಯಾರು ವಲಯದ ಆಟೋ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆ

Suddi Udaya

ಮಡಂತ್ಯಾರು : ಆಟೋ ಚಾಲಕ ಮಾಲಕರ ಸಂಘ ಬಿಎಮಎಸ್ ಸಂಯೋಜಿತ ಮಡಂತ್ಯಾರು ವಲಯದ ವಾರ್ಷಿಕ ಮಹಾಸಭೆಯು ಸಮನ್ವಯ ಬ್ಯಾಂಕ್ ನ ಮಹಡಿಯಲ್ಲಿ ಜರುಗಿತು.

ಮಹಾಸಭೆಯಲ್ಲಿ ಬಿಎಂಎಸ್ ಜಿಲ್ಲಾ ಅಧ್ಯಕ್ಷ ನಾಯ್ಯವಾದಿ ಅನಿಲ್ ಕುಮಾರ್ ಯು ಹಾಗೂ ಗೌರವ ಅಧ್ಯಕ್ಷ ಭದ್ರಿನಾಥ ಸಂಪಿಗೆತ್ತಾಯ ಇವರ ನೇತೃತ್ವದಲ್ಲಿ ಅಧಿಕಾರ ಹಸ್ತಾಂತರ ಕಾರ್ಯಕ್ರಮವು ನಡೆಯಿತು.

ನೂತನ ಅಧ್ಯಕ್ಷರಾಗಿ ಸಂದೀಪ್ ಕುಂದಾರ್ ಬಳ್ಳಮಂಜ, ಕಾರ್ಯದರ್ಶಿಯಾಗಿ ಶಿವರಾಮ ಮಡಿವಾಳ, ಉಪಾಧ್ಯಕ್ಷರಾಗಿ ಹಮೀದ್ ಪಾಂಡವರ ಕಲ್ಲು, ಜೊತೆ ಕಾರ್ಯದರ್ಶಿಯಾಗಿ ರವಿಚಂದ್ರ ಮರಕಡ, ಕೋಶಾಧಿಕಾರಿಯಾಗಿ ರಾಜೇಶ್ ಕುಕ್ಕಳ, ಕಾರ್ಯಕಾರಿ ಸಮಿತಿ ಲಾನ್ಸಿಲೆಟ್ ಬಳ್ಳಮಂಜ, ಆನಿಫ್ ಬಂಗೇರಕಟ್ಟೆ, ಎಂ. ಶಂಕರ ಪೂಜಾರಿ, ಗೌರವ ಅಧ್ಯಕ್ಷರಾಗಿ ಭದ್ರಿನಾಥ ಸಂಪಿಗೆತ್ತಾಯ ಮಚ್ಚಿನ, ಗೌರವ ಸಲಹೆಗಾರರಾಗಿ ಸತೀಶ್ ಮರಕಡ, ಆನಂದ ದೇವಾಡಿಗ ಬಳ್ಳಮಂಜ, ಸಂಘಟನೆ ಕಾರ್ಯದರ್ಶಿಯಾಗಿ ಪುರಂದರ ಶೆಟ್ಟಿ ನೆತ್ತರ, ಲೆಕ್ಕ ಪರಿಶೀಲನೆಗಾರರಾಗಿ ರಮೇಶ್ ಕೆ ಕುದ್ರಡ್ಕ, ವೆಂಕಟೇಶ ಮಾಹಿಲೋಡಿ, ಆಯ್ಕೆಮಾಡಲಾಯಿತು.

Leave a Comment

error: Content is protected !!