23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾಳೆ(ಎ.27): ಗುರುವಾಯನಕೆರೆಯಲ್ಲಿ ತಾಲೂಕು ಮಟ್ಟದ ಬಂಟ ಕ್ರೀಡೋತ್ಸವ

ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ, ತಾಲೂಕು ಯುವ ಬಂಟರ ಹಾಗೂ ಮಹಿಳಾ ಬಂಟರ ವಿಭಾಗದ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಕ್ರೀಡೋತ್ಸವವು ಎ.27 ರಂದು ಗುರುವಾಯನಕೆರೆಯ ಶಕ್ತಿನಗರದ ನವಶಕ್ತಿ ಕ್ರೀಡಾಂಗಣದಲ್ಲಿ ಜರುಗಲಿದೆ.

ಈ ಕ್ರೀಡೋತ್ಸವದಲ್ಲಿ ಪಥಸಂಚಲನವು ವಿಶೇಷ ಆಕರ್ಷಣೆಯಾಗಿದ್ದು, ಬೆಳಿಗ್ಗೆ 9 ಗಂಟೆಗೆ ನವಶಕ್ತಿ ಕ್ರೀಡಾಂಗಣದಲ್ಲಿ 9 ವಲಯಗಳ ಕ್ರೀಡಾಳುಗಳು ಮತ್ತು ಬಂಟ ಸಮುದಾಯದವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಶಿಸ್ತುಬದ್ಧ ಮತ್ತು ಆಕರ್ಶಕವಾಗಿ ಪಥ ಸಂಚಲನ ನಡೆಸಿಕೊಟ್ಟ ತಂಡಗಳಿಗೆ ಹಾಗೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಥ ಸಂಚಲನದಲ್ಲಿ ಪಾಲ್ಗೊಂಡ ವಲಯಗಳಿಗೆ ಬಹುಮಾನ ನೀಡಲಾಗುತ್ತದೆ. ಕ್ರೀಡೋತ್ಸವದಲ್ಲಿ 6 ವರ್ಷದ ಒಳಗಿನ ಬಾಲಕ/ಬಾಲಕಿಯರಿಗೆ 50 ಮೀ ಓಟ, ಚೆಂಡು ಎಸೆತ, ಕಪ್ಪೆ ಜಿಗಿತ, 12 ವರ್ಗದ ಒಳಗಿನ ಬಾಲಕ/ಬಾಲಕಿಯರಿಗೆ 80 ಮೀ ಓಟ, ಚೆಂಡು ಎಸೆತ, ಲಿಂಬೆ ಚಮಚ, 17 ವರ್ಷದ ಒಳಗಿನ ಬಾಲಕ / ಬಾಲಕಿಯರಿಗೆ 100, 200, 40 ವರ್ಷದ ಒಳಗಿನ ಪುರುಷರು/ಮಹಿಳೆಯರಿಗೆ (18 ರಿಂದ 40 ವರ್ಷ) 100ಮೀ ಓಟ, 200ಮೀ ಓಟ, ಗುಂಡೆಸೆತ, 60 ವರ್ಷದ ಒಳಗಿನ ಪುರುಷರು/ಮಹಿಳೆಯರಿಗೆ (41ರಿಂದ 60ವರ್ಷ) 100ಮೀ ಓಟ, 200ಮೀ ವೇಗದ ನಡಿಗೆ, ಗುಂಡೆಸೆತ, 60 ವರ್ಷ ಮೇಲ್ಪಟ್ಟ ಹಿರಿಯರಿಗೆ (ಪುರುಷರು/ ಮಹಿಳೆಯರು): 100 ಮೀ ವೇಗದ ನಡಿಗೆ, ಗುಂಡೆಸೆತ, ಪುರುಷರಿಗೆ ವಾಲಿಬಾಲ್ (6+1), ಮಹಿಳೆಯರಿಗೆ ತ್ರೋಬಾಲ್ (9+1), ಹಗ್ಗ ಜಗ್ಗಾಟ (9+2) ಇರುವುದು. ವಿಜೇತರಿಗೆ ದೇವು ಪೂಂಜ ಟ್ರೋಫಿಯೊಂದಿಗೆ ನಗದು ಬಹುಮಾನ ನೀಡಲಾಗುತ್ತದೆ ಎಂದು ಬಂಟರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

Related posts

ಬೆಳ್ತಂಗಡಿ: ಅಪ್ಸರಾ ಫ್ಯಾಶನ್ಸ್ ಹಾಗೂ ಮಿಷ್‌ಮಷ್ ಫ್ಯಾನ್ಸಿ & ಗಿಫ್ಟ್ ಸೆಂಟರಿನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರುಷದ ಸ್ಪೆಷಲ್ ಆಫರ್

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ಸದಸ್ಯರಿಗೆ ಲೋಕಲ್ ಆರ್ಗನೈಜೇಷನ್ ಡೆವಲಪ್ಮೆಂಟ್ ತರಬೇತಿ

Suddi Udaya

ಬೆಳ್ತಂಗಡಿ ಬಿರುವೆರ್ ಕುಡ್ಲ ಸಂಘದ 49 ಹಾಗೂ 50ನೇ ಸೇವಾ ಯೋಜನೆ ದೇಣಿಗೆ ಹಸ್ತಾಂತರ

Suddi Udaya

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ: ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಪರೀಕ ಶ್ರೀ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ

Suddi Udaya

ಸುಲ್ಕೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ನೂತನ ಕಟ್ಟಡ ‘ಸುರಭಿ’ ಉದ್ಘಾಟನೆ

Suddi Udaya
error: Content is protected !!