ಮಲೆಬೆಟ್ಟು ಗ್ರಾಮ ಒನ್ ಸೇವಾ ಕೇಂದ್ರ ಉದ್ಘಾಟನೆ

Suddi Udaya

ಮಲೆಬೆಟ್ಟು: ಕೊಯ್ಯೂರು ಗ್ರಾಮದ ಮಲೆಬೆಟ್ಟುವಿನ ಎಂ.ಬಿ ಸಂಕೀರ್ಣದಲ್ಲಿ ನೂತನವಾಗಿ ಗ್ರಾಮ ಒನ್ ಸೇವಾ ಕೇಂದ್ರ ಸೆ.14ರಂದು ಉದ್ಘಾಟನೆಗೊಂಡಿತು.

ಗ್ರಾಮ ಪಂಚಾಯತ್ ಕೊಯ್ಯೂರು ಇದರ ಅಧ್ಯಕ್ಷೆ ದಯಾಮಣಿ ಇವರು ಉಧ್ಘಾಟನೆ ನೆರವೇರಿಸಿ ಶುಭಹಾರೈಸಿದರು. ವಿಶೇಷ ಅತಿಥಿಗಳಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭಾಗವಹಿಸಿ ನೂತನ ಮಳಿಗೆಗೆ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿ ಅಧ್ಯಕ್ಷ ನಾಗೇಶ್ ಕುಮಾರ್, ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ನವೀನ ಕುಮಾರ್, ಕೊಯ್ಯೂರು ಗ್ರಾ.ಪಂ ಉಪಾಧ್ಯಕ್ಷ ಹರೀಶ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರವೀಣ್ ಕುಮಾರ್, ಕೊಯ್ಯೂರು ಗ್ರಾ. ಪಂ ಮಾಜಿ ಅಧ್ಯಕ್ಷ ಜಗನಾಥ್, ಜುಮ್ಮಾ ಮಸೀದಿ ಮಲೆಬೆಟ್ಟು ಅಧ್ಯಕ್ಷ ಅಬೂಬಕ್ಕರ್ ಮಟ್ಲ, ಕೊಯ್ಯೂರು ಗ್ರಾ. ಪಂ ಸದಸ್ಯರಾದ ಲೋಕೇಶ್ ಗೌಡ, ಇಸುಬು, ವಿಶಾಲಾಕ್ಷಿ, ಹೇಮಾವತಿ, ಗಿರೀಶ್ , ದಿವ್ಯ , ಉಜಿರೆ ಕಾರ್ತಿಕ್ ಎಂಟರ್ ಪ್ರೈಸಸ್ ಮಾಲಕರು ಧರ್ಮಣ್ಣ ಗೌಡ, ಪ್ರಮುಖರಾದ ಶಿವಪ್ಪ ಗೌಡ, ಮುಖ್ಯ ಶಿಕ್ಷಕರಾದ ರಂಗಸ್ವಾಮಿ, ಕಟ್ಟಡ ಮಾಲಕರಾದ ಬಾವಙ್ಙ,
ಸಾಧಿಕ್ ಮಾಸ್ಟ್ರು ಮಲೆಬೆಟ್ಟು, ಡಿ ಹೆಚ್ ಇಬ್ರಾಹಿಂ, ಗಂಗಯ್ಯ ಗೌಡ, ಅಬ್ದುಲ್ಲ,ಭಾಸ್ಕರ ಆಚಾರ್ಯ, ಹೈದರ್ ಕಜೆ, ಡಿಹೆಚ್ ಸಾಧಿಕ್, ಸಂಶುದ್ದೀನ್, ನಾರಾಯಣ ನೀರಕಜೆ, ಅಕ್ಬರ್ ಅಂಗಡಿ, ಆದಂ, ದನಂಜಯ ರಾವ್ ಬೆಳ್ತಂಗಡಿ, ‌ಸುಧೀರ್ ದೇವಾಡಿಗ ಬೆಳ್ತಂಗಡಿ, ಯೋಗೀಶ್ ದುರ್ಗಾ ಲಾಂಡ್ರಿ ಬೆಳ್ತಂಗಡಿ, ಸುರೇಶ್ ಸುವರ್ಣ ಮಾಪಲಾಡಿ, ನವೀನ್ ಗೌಡ ಸವಣಾಲು, ರಕ್ಷಿತ್ ಅಳದಂಗಡಿ ಉಪಸ್ಥಿತರಿದ್ದರು.

ಆಗಮಿಸಿದ ಎಲ್ಲರನ್ನೂ ಮಾಲಕರಾದ ಮೊಹಮ್ಮದ್ ಸಿದ್ದಿಕ್ ಮಲೆಬೆಟ್ಟು ಹಾಗೂ ಪರ್ಝಾನ ದಂಪತಿಗಳು ಸ್ವಾಗತಿಸಿದರು. ಗುರುರಾಜ್ ಗುರಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!