ಮಡಂತ್ಯಾರು ವಲಯದ ಆಟೋ ಚಾಲಕ ಮಾಲಕರ ಸಂಘದ ವತಿಯಿಂದ ಧನಸಹಾಯ ಹಸ್ತಾಂತರ

Suddi Udaya

ಮಡಂತ್ಯಾರು ವಲಯದ ಬಿಎಂಎಸ್ ಸಂಯೋಜಿತ ಆಟೋ ಚಾಲಕ ಮಾಲಕರ ಸಂಘದ ವತಿಯಿಂದ ಇತ್ತೀಚೆಗೆ ನಿಧನರಾದ ಆಟೋ ಚಾಲಕ ಮಾಲಕರ ಸಂಘದ ಸದಸ್ಯ ಅಶೋಕ್ ಮಂಜ್ಲಲ್ ಪಲಿಕೆ ಇವರು ಅನಾರೋಗ್ಯದಿಂದ ನಿಧನರಾಗಿದ್ದು ಇವರ ಬಡತನ ವನ್ನು ನೋಡಿದ ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘದ ಪ್ರಮುಖರು ಅವರ ಮಗಳಾದ ಗಾನ್ವಿ ಪಿ. ಈ ಮಗುವಿಗೆ ಸದಸ್ಯರ ಸಹಕಾರ ದಿಂದ ಹಾಗೂ ದಾನಿಗಳ ಸಹಕಾರದಿಂದ ಸಂಗ್ರಹ ಮಾಡಿದ ಒಟ್ಟು ರೂ. 62 ಸಾವಿರ ಮೊತ್ತವನ್ನು ಮಗು ಗಾನ್ವಿ ತಾಯಿ ಸುನೀತ ಇವರಿಗೆ ಬಾಂಡ್ ವಿತರಣೆ ಮೂಲಕ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಸತೀಶ್ ಮರಕಡ, ಮಾಜಿ ಕಾರ್ಯದರ್ಶಿ, ಕುಶಾಲಪ್ಪ ಗೌಡ, ನೂತನ ಅಧ್ಯಕ್ಷರಾದ ಸಂದೀಪ್ ಕುಂದಾರ ಬಳ್ಳಮಂಜ, ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘ ತಾಲೂಕು. ಸಮಿತಿಯ ಪ್ರ ಕಾರ್ಯದರ್ಶಿ ರಮೇಶ್ ಕೆ ಕುದ್ರಡ್ಕ, ಸಂಘದ ಉಪಾಧ್ಯಕ್ಷರಾದ ಹಮೀದ್ ಪಾಂಡವರಕಲ್ಲು, ನೂತನ ಕಾರ್ಯದರ್ಶಿ ಶಿವರಾಮ ಮಡಿವಾಳ, ಪುನೀತ್ ಮಡುವು, ಲಾನ್ಸಿಲೆಟ್, ಆನಂದ ಪಾದೆ, ರವಿಚಂದ್ರ ಮರಕಡ ಉಪಸ್ಥಿತರಿದ್ದರು.

Leave a Comment

error: Content is protected !!