April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶಿಬರಾಜೆ ಪಾದೆ ಅಂಗನವಾಡಿಯಲ್ಲಿ ಪೌಷ್ಠಿಕ ಆಹಾರ ಸಪ್ತಾಹ

ಶಿಬರಾಜೆ: ಇಲ್ಲಿನ ಶಿಬರಾಜೆ ಪಾದೆ ಅಂಗನವಾಡಿಯಲ್ಲಿ ಪೋಷಣ್ ಮಾಸಾಚರಣೆ ಅಂಗವಾಗಿ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮವು ಸೆ.15ರಂದು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಅಪೌಷ್ಠಿಕತೆ ಬಗ್ಗೆ, ಪೌಷ್ಠಿಕ ಆಹಾರಗಳ ವಿಧಗಳ ಬಗ್ಗೆ ಮತ್ತು ಅವುಗಳ ಸೇವನೆಯಲ್ಲಿ ಮಕ್ಕಳ ಮನ ಒಲಿಸುವ ಪೋಷಕರ ಪಾತ್ರದ ಬಗ್ಗೆ ಸಿಹೆಚ್‌ಒ ನಿಖಿತಾ, ಕಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ರೇಖಾ, ಕಳೆಂಜ ಗ್ರಾ.ಪಂ ಸದಸ್ಯರು ಹಾಗೂ ಶಾಲಾ ಬಾಲವಿಕಾಸ ಸಮಿತಿಯ ಸದಸ್ಯರಾದ ಜೆ.ಎಸ್ ನಿತ್ಯಾನಂದ ರೈ, ಆಶಾ ಕಾರ್ಯಕರ್ತೆ ಪುಷ್ಪಾ ಮಾಹಿತಿಯನ್ನು ತಿಳಿಸಿಕೊಟ್ಟರು. ಮಕ್ಕಳ ಪೋಷಕರು ಮನೆಯಲ್ಲೇ ತಯಾರಿಸಿ ತಂದಂತಹ ಪೌಷ್ಠಿಕ ಆಹಾರವನ್ನು ಎಲ್ಲರೂ ಸವಿದರು.


ಆಶಾ ಕಾರ್ಯಕರ್ತೆ ಶ್ರೀಮತಿ ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸಹಾಯಕಿ ಅನ್ಸಿಲ್ಲಾ ರೋಶ್ನಿ ಹಾಗೂ ಸ್ತ್ರೀ ಶಕ್ತಿ ಸಂಘದ ಸದಸ್ಯರು ಸಹಕರಿಸಿದರು.

Related posts

ಬಳಂಜ: ನಾಲ್ಕೂರು ಕೃಷಿಕ ಕರಿಯ ಪೂಜಾರಿ ಅನಾರೋಗ್ಯದಿಂದ ನಿಧನ

Suddi Udaya

ವಿದ್ಯುತ್ ತಂತಿಗೆ ತಾಗಿದ ಕಾಂಕ್ರೀಟ್ ಮಿಕ್ಸಿಂಗ್ ಲಾರಿ : ರಸ್ತೆಗೆ ಉರುಳಿದ ಎರಡು ವಿದ್ಯುತ್ ಕಂಬ

Suddi Udaya

ಷರತ್ತುಗೊಳ್ಳಪಟ್ಟು ಮರು ನೋಂದಣಿ ಮಾಡಿಕೊಳ್ಳಲು ಸಂಘ ಸಂಸ್ಥೆಗಳಿಗೆ ಅವಕಾಶ

Suddi Udaya

ಉಜಿರೆ‌: ಬೆನಕ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ತಜ್ಞ ವೈದ್ಯರ ಸೇವೆ ಆರಂಭ

Suddi Udaya

ಬೆಳ್ತಂಗಡಿ: ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಕಾರ್ಯಾಲಯ ಹಾಗೂ ಭಜನೋತ್ಸವ ಸಮಿತಿಯ ಸಮಾಲೋಚನಾ ಸಭೆ

Suddi Udaya
error: Content is protected !!