ಕೊಕ್ಕಡ ಜೇಸಿ ಸಪ್ತಾಹದ ಸಮಾರೋಪ ಸಮಾರಂಭದ ಅಂಗವಾಗಿ ಅಶಕ್ತರಿಗೆ ನೆರವು

Suddi Udaya

ಕೊಕ್ಕಡ: ಜೇಸಿ ಸಪ್ತಾಹದ ಸಮಾರೋಪ ಸಮಾರಂಭದ ಅಂಗವಾಗಿ ಸೆ. 17 ರಂದು ಕೊಕ್ಕಡ ಕಪಿಲಾ ಜೇಸಿ ಸಂಸ್ಥೆಯ ವತಿಯಿಂದ ಮನೆ ಮನೆ ಭೇಟಿ ನಡೆಸಲಾಯಿತು.

ಆಯ್ದ ಗ್ರಾಮಗಳಲ್ಲಿನ ಹಿರಿಯ ನಾಗರಿಕರು, ಅಶಕ್ತರ ಸಮೀಕ್ಷೆ ನಡೆಸಲಾಯಿತು.

ಇದೇ ಸಂದರ್ಭದಲ್ಲಿ ನಿಡ್ಲೆ ಗ್ರಾಮ ಕಲ್ಕುಡ ಗುಡ್ಡೆ ಸಂಜೀವ ಎಂ. ಕೆ ಅವರ ಪತ್ನಿ ಪ್ರೇಮ ಅವರ ಚಿಕಿತ್ಸೆಗೆ ನೆರವು ನೀಡಲಾಯಿತು.

ವಿವಿಧ ಕಾಯಿಲೆ ಪೀಡಿತರ ಯೋಗ ಕ್ಷೇಮ ವಿಚಾರಿಸಿ ಆತ್ಮ ಸ್ಥೈರ್ಯ ತುಂಬಿ, ಹಣ್ಣು ಹಂಪಲು ವಿತರಣೆ ಮಾಡಲಾಯಿತು.

ಜೇಸಿ ತಂಡದ ಅಧ್ಯಕ್ಷರಾದ ಜಿತೇಶ್ ಎಲ್. ಪಿರೇರಾ, ನಿಕಟಪೂರ್ವ ಅಧ್ಯಕ್ಷರಾದ ಕೆ. ಶ್ರೀಧರ ರಾವ್, ಜೋಸೆಫ್ ಪಿರೇರಾ, ಜೆಸಿಂತಾ ಡಿ ಸೋಜ, ಸಂಧ್ಯಾ , ಕಮಲ ಮುಂತಾದವರು ಉಪಸ್ಥಿತರಿದ್ದರು.

Leave a Comment

error: Content is protected !!