27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಕ್ಕಡ ರಸ್ತೆಯ ಇಕ್ಕೆಲಗಳಲ್ಲಿ ಅಪಾಯಕಾರಿಯಾದ ಮರಗಿಡಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರಿಂದ ಅರಸಿನಮಕ್ಕಿ ಪಂ.ಅ. ಅಧಿಕಾರಿಯವರಿಗೆ ಮನವಿ

ಅರಸಿನಮಕ್ಕಿ: ಕೊಕ್ಕಡ ರಸ್ತೆಯ ಇಕ್ಕೆಲಗಳಲ್ಲಿ ಅಪಾಯಕಾರಿಯಾದ ಮರಗಿಡಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಅರಸಿನಮಕ್ಕಿ ಗ್ರಾ.ಪಂ. ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಮನವಿ ನೀಡಿದರು.

ಹತ್ಯಡ್ಕ ಗ್ರಾಮದ ಅರಸಿನಮಕ್ಕಿ ಪೇಟೆಯಿಂದ ಕೊಕ್ಕಡದ ಕಾಪಿನಬಾಗಿಲಿನ ವರೆಗೆ ಡಾಮರು ರಸ್ತೆಯ ಎರಡೂ ಬದಿಯಿಂದ ಮರಗಳು ಗಿಡಗಂಟಿಗಳು ಬೆಳೆದು ವಾಹನ ಸವಾರರಿಗೆ ಭಾರಿ ಅನಾನುಕೂಲವಾಗಿರುತ್ತದೆ ಹಾಗೂ ರಸ್ತೆ ಬದಿ ಮರಗಿಡಗಳು ಬೆಳೆದು ರಸ್ತೆ ಕಾಣದ ಹಾಗೆ ಇರುವುದರಿಂದ ಅಪಘಾತಗಳು ಆಗುವ ಸಂಭಾವ ಇದೆ ಎಂದು ಕೂಡಲೇ ತೆರವುಗೊಳಿಸುವಂತೆ ಅರಸಿನಮಕ್ಕಿ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಅರಸಿನಮಕ್ಕಿಯವರಾದ ಅವಿನಾಶ್ ಬಿಢೆ, ಬಿ ಅಚ್ಚುತ, ಬಿ ಅಬ್ಬಾಸ್, ರವಿ ಶೆಟ್ಟಿ, ಕಾಶಿನಾಥ್, ಪಿ ರವಿ, ಪರಮೇಶ್ವರ, ರಾಕೇಶ್ ಶೆಟ್ಟಿ, ಗುರುಪ್ರಸಾದ್, ಕೆ.ಕೆ ರಾಜ, ಶ್ರೀಕರ ಬಿಢೆ, ಸ್ತುತಿ ಬಿಢೆ, ಭವ್ಯ, ಕೃಷ್ಣಪ್ಪ ಗೌಡ, ವಿಜಯ್ ಕುಮಾರ್, ಸುಂದರ ಶೆಟ್ಟಿಗಾರ್ ಹಾಗೂ ಇನ್ನೀತರರು ಮನವಿಯನ್ನು ನೀಡಿದ್ದಾರೆ.

Related posts

ಹುಣ್ಸೆಕಟ್ಟೆ: ಶ್ರೀ ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ 26ನೇ ಸಾಮೂಹಿಕ ಸತ್ಯನಾರಾಯಣ ಪೂಜೆ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದ ಹಿರಿಯ ಧರ್ಮಗುರು ವಂ| ಫಾ. ಅಬ್ರಹಾಂ ಪಟ್ಟೇರಿ ರವರಿಗೆ ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್ ವತಿಯಿಂದ ಸನ್ಮಾನ

Suddi Udaya

ಕನ್ಯಾಡಿ 32 ಮತ್ತು 33 ಬೂತ್‌ಗೆ ಕೆಪಿಸಿಸಿ ಪ್ರ. ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಭೇಟಿ

Suddi Udaya

ಕಣಿಯೂರು ವಲಯದ ಪದ್ಮುಂಜ ಕಾರ್ಯಕ್ಷೇತ್ರದಲ್ಲಿ ಶ್ರೀ ಗೌರಿ ಜ್ಞಾನ ವಿಕಾಸ ಕೇಂದ್ರದಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ

Suddi Udaya

ಗ್ರಾಮೀಣ ಪ್ರತಿಭೆ ಉತ್ತಮ‌ ಸಾಧನೆ, ಅಂಡಿಂಜೆಯ ದ್ವಿಶಾನ್ ಜೈನ್ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ

Suddi Udaya

ಕಡಬದ ನವ ಜೀವನ ಸದಸ್ಯರಿಂದ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರ ಭೇಟಿ

Suddi Udaya
error: Content is protected !!