25.5 C
ಪುತ್ತೂರು, ಬೆಳ್ತಂಗಡಿ
June 8, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ನೀರಚಿಲುಮೆಯಲ್ಲಿ ಚರಂಡಿಗೆ ಉರುಳಿದ ಕಾರು: ನ್ಯಾಯವಾದಿ ಬಿ.ಎಂ ಭಟ್ ಅಪಾಯದಿಂದ ಪಾರು

ಧರ್ಮಸ್ಥಳ: ಇಲ್ಲಿಯ ನೀರಚಿಲುಮೆ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದು ಅಪಘಾತವಾಗಿದ್ದು, ಚಾಲಕ ಅಪಾಯದಿಂದ ಪಾರಾದ ಘಟನೆ ಇಂದು ಸೆ.22 ರಂದು ಬೆಳಗ್ಗೆ ನಡೆದಿದೆ.

ಕಾರ್ಮಿಕ ಮುಖಂಡ ಹಾಗೂ ನ್ಯಾಯವಾದಿಯಾಗಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಪಿಐಎಂ ನಡೆಸುತ್ತಿರುವ ಪ್ರತಿಭಟನೆಯ ನೇತೃತ್ವದ ವಹಿಸಿದ್ದ ಬಿ.ಎಂ ಭಟ್ ಅವರ ಕಾರು ಅಪಘಾತಕ್ಕೆ ಒಳಗಾಗಿದೆ.

ಇಂದು ಬೆಳಿಗ್ಗೆ ಬೆಳ್ತಂಗಡಿಯ ತಮ್ಮ ಕಚೇರಿಗೆ ಬರುತ್ತಿರುವ ಸಮಯ ನೀರಚಿಲುಮೆ ಬಳಿ ಕಾರು ಅವರ ನಿಯಂತ್ರಣವನ್ನು ಕಳೆದುಕೊಂಡು ರಸ್ತೆಯ ಎಡಬದಿಗೆ ಚಲಿಸಿದ್ದು, ಕೂಡಲೇ ಅವರು ಕಾರನ್ನು ಬಲಬದಿಗೆ ತಿರುಗಿಸಿದಾಗ ಕಾರು ಬಲಬದಿಯ ರಸ್ತೆ ಚರಂಡಿಗೆ ಬಿದ್ದಿತ್ತೆನ್ನಲಾಗಿದೆ. ಕಾರಿನ ಎದುರು ಭಾಗ ಜಖಂಗೊಂಡಿದ್ದು, ಬಿ.ಎಂ ಭಟ್ ಅವರು ಅಪಾಯದಿಂದ ಪಾರಾಗಿದ್ದಾರೆ. ಬೆಳಗ್ಗಿನ ವೇಳೆ ಈ ರಸ್ತೆಯಲ್ಲಿ ವಾಹನಗಳ ಓಡಾಟ ಅಧಿಕವಿದ್ದು, ಇವರ ಕಾರು ಅಪಘಾತವಾಗುವ ವೇಳೆ ಎದುರಿನಿಂದ ಯಾವುದೇ ವಾಹನ ಬಾರದಿರುವುದರಿಂದ ಸಂಭವೀನಿಯ ಅಪಘಾತ ತಪ್ಪಿದೆ.

Related posts

ಉಜಿರೆ: ಅಂತರ್ ಕಾಲೇಜು ಮಟ್ಟದ ವಾಲಿಬಾಲ್ ಪಂದ್ಯಾಟ: ಎಸ್ ಡಿ ಎಮ್ ಕಾಲೇಜಿಗೆ ಚಾಂಪಿಯನ್ ಶಿಪ್ ಪಟ್ಟ

Suddi Udaya

ಚಾರ್ಮಾಡಿ: ನಿಯಂತ್ರಣ ತಪ್ಪಿ ಬೊಲೆರೋ ವಾಹನ ಪಲ್ಟಿ

Suddi Udaya

ಅಭ್ಯಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಸ್ಫಾಕ್-೨೦೨೬

Suddi Udaya

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟದ ಉದ್ಘಾಟನೆ

Suddi Udaya

ನಾಳೆ(ಮೇ25): ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳ್ತಂಗಡಿಗೆ ಆಗಮನ

Suddi Udaya

ಅಳದಂಗಡಿ ಶ್ರೀ ಸತ್ಯ ದೇವತೆ ಕಲ್ಲುರ್ಟಿ ದೇವಸ್ಥಾನಕ್ಕೆ ನಟ ವಿಜಯರಾಘವೇಂದ್ರ ಭೇಟಿ

Suddi Udaya
error: Content is protected !!