ಬದುಕು ಕಟ್ಟೋಣ ಬನ್ನಿ ತಂಡದ ಕೆಲಸ ಕಾರ್ಯಗಳಿಗೆ ರಾಜ್ಯಾದ್ಯಂತ ಮೆಚ್ಚುಗೆ: ತಂಡದ ಸಂಚಾಲಕ ಮೋಹನ್ ಕುಮಾರ್ ರವರ ಭಾವಚಿತ್ರ ಪೇಂಟಿಂಗ್ ನಲ್ಲಿ ತಯಾರಿಸಿ ಬಳ್ಳಾರಿಯ ಅಭಿಮಾನಿಯಿಂದ ಹಸ್ತಾಂತರ

Suddi Udaya

ಬೆಳ್ತಂಗಡಿ: ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಮಾಜಮುಖಿ ಚಿಂತನೆ ಹಾಗೂ ಕಾರ್ಯವೈಖರಿಗೆ ರಾಜ್ಯವ್ಯಾಪ್ತಿಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು ಬಳ್ಳಾರಿಯ ಅಭಿಮಾನಿಯಿಂದ ತಂಡದ ಸಂಚಾಲಕ ಮೋಹನ್ ಕುಮಾರ್ ರವರ ಬೃಹತ್ ಗಾತ್ರದ ಭಾವಚಿತ್ರ ತಯಾರಿಸಿ ಹಸ್ತಾಂತರಿಸಿದರು.

ತಾಲೂಕಿಗೆ ಅಪ್ಪಲಿಸಿದ ನೆರೆ ಪ್ರವಾಹದಲ್ಲಿ ಮಾಡಿದ ಕೆಲಸಗಳು, ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿ ಆಸರೆಯಾದ ಬದುಕು ಕಟ್ಟೋಣ ಬನ್ನಿ ತಂಡದ ಕೆಲಸ ಕಾರ್ಯಗಳನ್ನು ಯೂಟ್ಯೂಬ್ ಮೂಲಕ ವೀಕ್ಷಿಸಿ, ಮೆಚ್ಚಿ ತಂಡದ ಸಂಚಾಲಕ, ಲಕ್ಷ್ಮಿ ಗ್ರೂಪ್ಸ್ ಕನಸಿನ ಮನೆ ಇದರ ಮಾಲಕ ಮೋಹನ್ ಕುಮಾರ್ ಅವರ ಭಾವಚಿತ್ರ ತಯಾರಿಸಿ ಬಳ್ಳಾರಿಯ ಅಭಿಯಾನಿ ಗುರುರಾಜ್ ಎಂಬವರು ಬಳ್ಳಾರಿಯಿಂದ ಉಜಿರೆಗೆ ಬಸ್ ಮುಖಾಂತರ ಆಗಮಿಸಿ ಮೋಹನ್ ಕುಮಾರ್ ಅವರನ್ನು ಭೇಟಿ ಮಾಡಿ ಎರಡು ಬೃಹತ್ ಗಾತ್ರದ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದರು.

ಈ ಸಂದರ್ಭ ಮೋಹನ್ ಕುಮಾರ್ ಅವರು ಬಳ್ಳಾರಿಯ ಅಭಿಮಾನಿಗೆ ಧನ್ಯವಾದ ಅರ್ಪಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.

Leave a Comment

error: Content is protected !!